<p><strong>ಕಳಸ:</strong> ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ಶನಿವಾರ ಮುಳುಗಿದ್ದ ಇಬ್ಬರು ಯುವಕರ ಶವ ಭಾನುವಾರ ಸಿಕ್ಕಿದೆ.</p>.<p>ಬಾಳೆಹೊಳೆ ಸಮೀಪದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಕ್ಕನ ಮನೆಗೆ ಕೊಡಗು ಜಿಲ್ಲೆಯಿಂದ ಅಭಿಷೇಕ್ (27) ಮತ್ತು ಯೋಗೀಶ್ (17) ಬಂದಿದ್ದರು.</p>.<p>ಶನಿವಾರ ತೋಟದ ಸಮೀಪದ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಈ ಯುವಕರು ನಾಪತ್ತೆಯಾಗಿದ್ದರು. ಶನಿವಾರ ಸಂಜೆವರೆಗೂ ಅಗ್ನಿಶಾಮಕ ದಳ ಮತ್ತು ಕಳಸ ಪೊಲೀಸರು ಹುಡುಕಾಟ ನಡೆಸಿದ್ದರೂ ಯುವಕರ ಶವ ಸಿಕ್ಕಿರಲಿಲ್ಲ.</p>.<p>ಭಾನುವಾರ ಮಧ್ಯಾಹ್ನದ ವೇಳೆಗೆ ಶವ ಸಿಕ್ಕಿದ್ದು, ನದಿ ದಡದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಸ್ಥರಿಗೆ ನೀಡಲಾಯಿತು. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>
<p><strong>ಕಳಸ:</strong> ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ಶನಿವಾರ ಮುಳುಗಿದ್ದ ಇಬ್ಬರು ಯುವಕರ ಶವ ಭಾನುವಾರ ಸಿಕ್ಕಿದೆ.</p>.<p>ಬಾಳೆಹೊಳೆ ಸಮೀಪದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಕ್ಕನ ಮನೆಗೆ ಕೊಡಗು ಜಿಲ್ಲೆಯಿಂದ ಅಭಿಷೇಕ್ (27) ಮತ್ತು ಯೋಗೀಶ್ (17) ಬಂದಿದ್ದರು.</p>.<p>ಶನಿವಾರ ತೋಟದ ಸಮೀಪದ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಈ ಯುವಕರು ನಾಪತ್ತೆಯಾಗಿದ್ದರು. ಶನಿವಾರ ಸಂಜೆವರೆಗೂ ಅಗ್ನಿಶಾಮಕ ದಳ ಮತ್ತು ಕಳಸ ಪೊಲೀಸರು ಹುಡುಕಾಟ ನಡೆಸಿದ್ದರೂ ಯುವಕರ ಶವ ಸಿಕ್ಕಿರಲಿಲ್ಲ.</p>.<p>ಭಾನುವಾರ ಮಧ್ಯಾಹ್ನದ ವೇಳೆಗೆ ಶವ ಸಿಕ್ಕಿದ್ದು, ನದಿ ದಡದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಸ್ಥರಿಗೆ ನೀಡಲಾಯಿತು. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>