ಉತ್ತರ ಕರ್ನಾಟಕದಿಂದ ಮೂಡಿಗೆರೆ ಮೂಲಕ ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರು ಚಾರ್ಮಾಡಿ ಘಾಟಿಯ ಹಸಿರಿನ ಸೊಬಗು, ಜಲಪಾತ ನೋಡಿ ದಂಗಾಗುತ್ತಾರೆ. ಪ್ರವಾಸಿಗರು ಘಾಟಿಯ ತಿರುವುಗಳಲ್ಲಿ ನಿರ್ಮಿಸಿರುವ ತಡೆಗೋಡೆ ಹತ್ತಿ ಸೆಲ್ಫಿ ತೆಗೆಯುವುದಕ್ಕೆ, ಜಲಪಾತದ ಸಮೀಪ ಹೋಗುವುದಕ್ಕೆ ನಿಷೇಧವಿದೆ. ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ. ರಸ್ತೆ ಬದಿಯಲ್ಲಿ ನಿಂತು ಸೌಂದರ್ಯ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.