<p>ಕಳಸ: ತಾಲ್ಲೂಕಿನ ಕಟ್ಟ ಕಡೆಯ ಗ್ರಾಮವಾದ ಶಂಕರಕುಡಿಗೆಯ ಗ್ರಾಮಸ್ಥರು ರಸ್ತೆ ಸಮಸ್ಯೆ ಕಾರಣಕ್ಕೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.</p>.<p>ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲೆಂದು ಕಳೆದ ವರ್ಷವೇ ₹ 70 ಲಕ್ಷ ಮಂಜೂರು ಆಗಿತ್ತು. ಲೋಕೋ ಪಯೋಗಿ ಇಲಾಖೆಯು ಶಂಕರಕುಡಿಗೆಯಿಂದ ಬಸರೀ ಕಟ್ಟೆ ಕಡೆಗಿನ 800 ಮೀಟರ್ ರಸ್ತೆ ದುರಸ್ತಿಗೆ ಸಜ್ಜಾಗಿತ್ತು. ವರ್ಷದ ಹಿಂದೆ ಗುತ್ತಿಗೆದಾರ ಈ ರಸ್ತೆಯನ್ನು ಅಗೆದು ಕಾಮಗಾರಿ ಆರಂಭಿಸಿದಾಗ ಗ್ರಾಮದ ರಸ್ತೆ ಅವ್ಯವಸ್ಥೆ ತೀರಿತು ಎಂದು ಗ್ರಾಮಸ್ಥರು ಸಂತಸಪಟ್ಟರು. ಆದರೆ, ಆನಂತರ ಈವರೆಗೂ ಕಾಮಗಾರಿ ನಡೆಸದೆ ಗುತ್ತಿಗೆ ದಾರ ನಾಪತ್ತೆ ಆಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<p>ಶಂಕರಕುಡಿಗೆಯಿಂದ ಪ್ರತಿದಿನ ಶಾಲೆಗೆ ತೆರಳಲು ಹತ್ತಾರು ಮಕ್ಕಳು, ಕೆಲಸಕ್ಕೆ ಹೋಗುವ ಕಾರ್ಮಿಕರು, ಆಸ್ಪತ್ರೆ ತಲುಪಬೇಕಾದ ರೋಗಿಗಳು, ಕೃಷಿ ಸಲಕರಣೆ ಕೊಂಡೊಯ್ಯಬೇಕಾದ ರೈತರು ಈ ರಸ್ತೆಯ ಅವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದಾರೆ. ಈ ರಸ್ತೆ ಅಗೆಯುವ ಮೊದಲು ತಕ್ಕ ಮಟ್ಟಿಗೆ ಉತ್ತಮ ಸ್ಥಿತಿಯಲ್ಲೇ ಇತ್ತು. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಅಗೆದು ಹಾಕಿದ ನಂತರ ದಪ್ಪ ಜಲ್ಲಿ ರಸ್ತೆ ತುಂಬೆಲ್ಲಾ ಹರಡಿ ಜನರ ಮತ್ತು ವಾಹನಗಳ ಸಂಚಾರಕ್ಕೆ ಅಸಾಧ್ಯ ಎಂಬಂತಾಗಿದೆ ಎಂಬುದು ಅವರ ದೂರು.</p>.<p>‘ರಸ್ತೆ ಅಗೆದು ಒಂದು ವರ್ಷ ಕಳೆದರೂ ಅಧಿಕಾರಿಗಳು ನಮ್ಮ ಊರಿಗೆ ಬಂದಿಲ್ಲ. ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ. ಮುಂದಿನ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿದ್ದೇವೆ’ ಎಂದು ಶಂಕರಕುಡಿಗೆ ಗ್ರಾಮಸ್ಥರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳಸ: ತಾಲ್ಲೂಕಿನ ಕಟ್ಟ ಕಡೆಯ ಗ್ರಾಮವಾದ ಶಂಕರಕುಡಿಗೆಯ ಗ್ರಾಮಸ್ಥರು ರಸ್ತೆ ಸಮಸ್ಯೆ ಕಾರಣಕ್ಕೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.</p>.<p>ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲೆಂದು ಕಳೆದ ವರ್ಷವೇ ₹ 70 ಲಕ್ಷ ಮಂಜೂರು ಆಗಿತ್ತು. ಲೋಕೋ ಪಯೋಗಿ ಇಲಾಖೆಯು ಶಂಕರಕುಡಿಗೆಯಿಂದ ಬಸರೀ ಕಟ್ಟೆ ಕಡೆಗಿನ 800 ಮೀಟರ್ ರಸ್ತೆ ದುರಸ್ತಿಗೆ ಸಜ್ಜಾಗಿತ್ತು. ವರ್ಷದ ಹಿಂದೆ ಗುತ್ತಿಗೆದಾರ ಈ ರಸ್ತೆಯನ್ನು ಅಗೆದು ಕಾಮಗಾರಿ ಆರಂಭಿಸಿದಾಗ ಗ್ರಾಮದ ರಸ್ತೆ ಅವ್ಯವಸ್ಥೆ ತೀರಿತು ಎಂದು ಗ್ರಾಮಸ್ಥರು ಸಂತಸಪಟ್ಟರು. ಆದರೆ, ಆನಂತರ ಈವರೆಗೂ ಕಾಮಗಾರಿ ನಡೆಸದೆ ಗುತ್ತಿಗೆ ದಾರ ನಾಪತ್ತೆ ಆಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<p>ಶಂಕರಕುಡಿಗೆಯಿಂದ ಪ್ರತಿದಿನ ಶಾಲೆಗೆ ತೆರಳಲು ಹತ್ತಾರು ಮಕ್ಕಳು, ಕೆಲಸಕ್ಕೆ ಹೋಗುವ ಕಾರ್ಮಿಕರು, ಆಸ್ಪತ್ರೆ ತಲುಪಬೇಕಾದ ರೋಗಿಗಳು, ಕೃಷಿ ಸಲಕರಣೆ ಕೊಂಡೊಯ್ಯಬೇಕಾದ ರೈತರು ಈ ರಸ್ತೆಯ ಅವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದಾರೆ. ಈ ರಸ್ತೆ ಅಗೆಯುವ ಮೊದಲು ತಕ್ಕ ಮಟ್ಟಿಗೆ ಉತ್ತಮ ಸ್ಥಿತಿಯಲ್ಲೇ ಇತ್ತು. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಅಗೆದು ಹಾಕಿದ ನಂತರ ದಪ್ಪ ಜಲ್ಲಿ ರಸ್ತೆ ತುಂಬೆಲ್ಲಾ ಹರಡಿ ಜನರ ಮತ್ತು ವಾಹನಗಳ ಸಂಚಾರಕ್ಕೆ ಅಸಾಧ್ಯ ಎಂಬಂತಾಗಿದೆ ಎಂಬುದು ಅವರ ದೂರು.</p>.<p>‘ರಸ್ತೆ ಅಗೆದು ಒಂದು ವರ್ಷ ಕಳೆದರೂ ಅಧಿಕಾರಿಗಳು ನಮ್ಮ ಊರಿಗೆ ಬಂದಿಲ್ಲ. ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ. ಮುಂದಿನ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿದ್ದೇವೆ’ ಎಂದು ಶಂಕರಕುಡಿಗೆ ಗ್ರಾಮಸ್ಥರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>