‘ಭಾನುವಾರ ನಸುಕಿನಲ್ಲಿ ಅಂಬುಲೆನ್ಸ್ ಸಿಬ್ಬಂದಿಯೊಬ್ಬರು ಫೋನ್ ಮಾಡಿ ಕಿಶನ್ಗಂಜ್ ಬಳಿ ರಸ್ತೆ ಬದಿ ಗಣೇಶ್ ಅವರ ಶವ ಪತ್ತೆಯಾಗಿದೆ ಎಂದರು. ಗಣೇಶ್ ಅವರು ಜೂನ್ 9ರಂದು ಊರಿನಿಂದ ಹೋಗಿದ್ದರು. ಏನಾಗಿದೆ ಎಂಬುದು ಗೊತ್ತಿಲ್ಲ. ಜೂ.12ರಂದು ಅವರು ಗುವಾಹಟಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು’ ಎಂದು ಗಣೇಶ್ ಅವರ ಪತ್ನಿ ಶ್ವೇತಾ ‘ಪ್ರಜಾವಾಣಿ’ಗೆ ತಿಳಿಸಿದರು.
ಗಣೇಶ್ ಅವರು ಮಸಿಗದ್ದೆಯ ಕೂಲಿಕಾರ ನಾಗಯ್ಯ ಮತ್ತು ಗಂಗಮ್ಮ ದಂಪತಿ ಪುತ್ರ. ಪಿಯುಸಿ ವಿದ್ಯಾಭ್ಯಾಸ ಮಾಡಿದ್ದರು. 14 ವರ್ಷಗಳಿಂದ ಸೇನೆಯಲ್ಲಿ ಇದ್ದರು. ರಾಜಸ್ತಾನ, ದೆಹಲಿ, ಗೋವಾ, ಜಮ್ಮುವಿನಲ್ಲಿ ಕಾರ್ಯನಿರ್ವಹಿಸಿದ್ದರು. ವಿವಾಹವಾಗಿ ಆರು ವರ್ಷವಾಗಿತ್ತು. ಪುತ್ರಿ ಆದ್ಯಾ ಇದ್ದಾರೆ.