ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ತೆರೆದಿದ್ದು, ಇಲ್ಲಿ ತಿದ್ದುಪಡಿ ಮಾಡಿಸಲು ಗ್ರಾಮೀಣ ಭಾಗದ ನೂರಾರು ಜನರು ಬೆಳಿಗ್ಗೆ 6 ಗಂಟೆಯಿಂದಲೇ ಸರತಿ ನಿಲ್ಲುತ್ತಾರೆ. 10 ಗಂಟೆಗೆ ಬಾಗಿಲು ತೆಗೆದ ಕೂಡಲೇ ಸರತಿ ಸಾಲಿನಲ್ಲಿ ಇರುವವರಿಗೆ ಟೋಕನ್ ನೀಡಲಾಗುತ್ತದೆ. ಪ್ರತಿದಿನ 40 ಟೋಕನ್ ಮಾತ್ರ ನೀಡುತ್ತಿದ್ದು, ಉಳಿದವರು ವಾಪಸ್ ಹೋಗಬೇಕಾಗುತ್ತದೆ. ಗ್ರಾಮೀಣ ಭಾಗದವರು ಮಕ್ಕಳನ್ನು ಕರೆತರುವುದು ಟೋಕನ್ ಸಿಗದೆ ಮತ್ತೆ ಮಾರನೇ ದಿನ ಬರುವುದು ಮಾಮೂಲಿಯಾಗಿದೆ. ಟೋಕನ್ ಸಿಗದವರು ಅಲ್ಲಿನ ಸಿಬ್ಬಂದಿ ಜೊತೆ ವಾಗ್ವಾದಕ್ಕೂ ಮುಂದಾಗುವುದು ನಿತ್ಯನೋಟ.