ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವತ್ತು ವೀರಶೈವ ಅಭಿವೃದ್ಧಿ ನಿಗಮ, ಮುಂದೆ ಸಂದರ್ಭ ಬಂದರೆ ಒಕ್ಕಲಿಗ, ಕುರುಬ ಮೊದಲಾದ ಸಮುದಾಯಗಳಿಗೂ ನಿಗಮ ಸ್ಥಾಪಿಸಬೇಕಾಗಬಹುದು. ಬೇಕು ಎನ್ನುವುದಾದರೆ ಎಲ್ಲ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಯಾವ ಸಮಯದಾಯಕ್ಕೂ ಬೇಡ ಎನ್ನುವುದಾದರೆ ವಿಧಾನಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಟಿಕೆಟ್ ನೀಡುವಾಗ, ಸಚಿವ ಸ್ಥಾನ ನೀಡುವಾಗ ಜಾತಿ ಪರಿಗಣಿಸುತ್ತೇವೆ. ಹೀಗಿರುವಾಗ, ಒಂದು ಜಾತಿಗೆ ಪರ ಮತ್ತೊಂದಕ್ಕೆ ವಿರುದ್ಧವಾಗಿ ಯಾಕೆ ನಿಲ್ಲಬೇಕು’ ಎಂದು ಪ್ರಶ್ನಿಸಿದರು.