ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ವೃದ್ಧರೊಬ್ಬರು ಭಾನುವಾರ ಮೃತಪಟ್ಟಿದ್ದಾರೆ. 41 ಮಂದಿಗೆ ಸೋಂಕು ದೃಢಪಟ್ಟಿದ್ದು, 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನಗರದ ಪಂಪಾನಗರದ 62 ವರ್ಷದ ಪುರುಷ (ಪಿ–140244) ಮೃತಪಟ್ಟವರು. ಈ ವ್ಯಕ್ತಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳೂ ಇದ್ದವು ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೃತರ ಸಂಖ್ಯೆ 24ಕ್ಕೆ (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಎರಡು ಪ್ರಕರಣ ಸಹಿತ) ಏರಿದೆ.
ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 30, ತರೀಕೆರೆ–5, ಕಡೂರು– 4, ಅಜ್ಜಂಪುರ ಹಾಗೂ ಮೂಡಿಗೆರೆಯ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ 614 ಸಕ್ರಿಯ ಪ್ರಕರಣಗಳು ಇವೆ. 440 ಮಂದಿ ಗುಣಮುಖರಾಗಿದ್ದಾರೆ. ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1087ಕ್ಕೆ ತಲುಪಿದೆ. ಜಿಲ್ಲೆಯ ವಿವಿಧೆಡೆ 357ನಿಯಂತ್ರಿತ ವಲಯ (ಕಂಟೈನ್ಮೆಂಟ್ ಝೋನ್) ಇವೆ.
ಪಟ್ಟಿ
ಜಿಲ್ಲೆಯಲ್ಲಿ ಒಟ್ಟು: 1087
ದಿನದ ಏರಿಕೆ: 41
ಸಕ್ರಿಯ ಪ್ರಕರಣ: 614
ದಿನದ ಏರಿಕೆ: 29
ಗುಣಮುಖ: 440
ದಿನದ ಏರಿಕೆ: 11
ಸಾವು: 24 (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ 2 ಪ್ರಕರಣ ಸಹಿತ)