ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಕಲ್ಪಿಸುತ್ತಾರೆ ಎಂಬ ವಿಶ್ವಾಸ ಇದೆ. ನಮ್ಮ ಅಭಿಯಾನ 1ರಂದು ಬೆಂಗಳೂರು ತಲುಪಲಿದೆ. ಮೀಸಲಾತಿ ಕಲ್ಪಿಸಿದರೆ ಅಭಿನಂದನಾ ಸಮಾರಂಭ ಮಾಡುತ್ತೇವೆ. ಮೀಸಲಾತಿ ಕಲ್ಪಿಸಲು ವಿಳಂಬ ಮಾಡಿದರೆ ಧರಣಿ ಸತ್ಯಾಗ್ರಹ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ’ ಎಂದರು.