ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಡೂರು ತಹಶೀಲ್ದಾರ್ ಎಂ.ಪಿ.ಕವಿರಾಜ್, ಈ ವಿಷಯ ಗಮನಕ್ಕೆ ಬಂದಿದೆ, ಅರ್ಜಿದಾರರು ಜಾತಿ ಪ್ರಮಾಣಪತ್ರಕ್ಕೆ ಕೋರಿಕೆ ಸಲ್ಲಿಸುವಾಗ ತಂದೆಯ ಜಾತಿ ಪ್ರಮಾಣಪತ್ರವನ್ನು ಲಗತ್ತಿಸಿರಲಿಲ್ಲ. ವಿಷಯ ನಿರ್ವಾಹಕರು ಕಾರಣ ನಮೂದಿಸುವ ಸಂದರ್ಭದಲ್ಲಿ ಇರುವ ಆಯ್ಕೆಗಳಲ್ಲಿ ತಪ್ಪು ಆಯ್ಕೆ ನಮೂದಿಸಿರುವ ಕಾರಣ ಹೀಗಾಗಿದೆ. ಈ ವಿಷಯವಾಗಿ ಅಟಲ್ ಜನಸ್ನೇಹಿ ಕೇಂದ್ರದ ವೆಬ್ ನಿರ್ವಾಹಕರಿಗೆ ನಿಗದಿತ ಕಾರಣಗಳನ್ನು ನಮೂದಿಸಲು ಅವಕಾಶವಾಗುವಂತೆ ಕೇಂದ್ರಗಳಲ್ಲಿ ಬದಲಾವಣೆ ಮಾಡಲು ಕೋರಲಾಗುವುದು' ಎಂದು ತಿಳಿಸಿದರು.