ಮಠದ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ಮಾಲೆಕೈಂಕರ್ಯ ಆರಂಭವಾಯಿತು. ಕೇಸರಿ ಪಂಚೆ, ಶಲ್ಯ ಧರಿಸಿದ್ದ 50ಕ್ಕೂ ಹೆಚ್ಚು ಭಕ್ತರು ದತ್ತಾತ್ರೇಯ ಭಾವಚಿತ್ರದ ಮುಂದೆ ಮಾಲೆ ಧರಿಸಿದರು. ದತ್ತಾತ್ರೇಯ ಸ್ವಾಮಿ ನಾಮಸ್ಮರಣೆ, ಭಜನೆ ನಡೆಯಿತು.
ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮ ಸೇನೆ ಕಾರ್ಯಕರ್ತರು ರಾಜ್ಯದಾದ್ಯಂತ ದತ್ತಮಾಲೆ ಧಾರಣೆ ಮಾಡುವರು. ಎಂಟು ದಿನಗಳು ವೃತಾಚರಣೆ ಮಾಡುವರು. ಮಾಲಾಧಾರಿಗಳು ಪಾದರಕ್ಷೆ ಧರಿಸುವುದಿಲ್ಲ. ಬೆಳಿಗ್ಗೆ, ಸಂಜೆ ಸ್ನಾನ ಮಾಡಿ, ದತ್ತಾತ್ರೇಯ ಪೂಜೆ, ಸ್ಮರಣೆ ಮಾಡುವರು ಎಂದರು.