ಮಂಗಳವಾರ ಮುಂಜಾನೆ ದಾಳಿ ನಡೆಸಿರುವ ಒಂಟಿ ಸಲಗವು, ಪಟ್ಟದೂರು ಗ್ರಾಮದ ಚಟಗಲ್ ಎಸ್ಟೇಟಿನ ಡಿ.ಎಲ್. ಅಶೋಕ್ ಕುಮಾರ್ ಎಂಬುವವರ ಮನೆ ಮುಂಭಾಗದ ಗೇಟ್, ತಡೆಬೇಲಿಯನ್ನು ಮುರಿದು ತೋಟದೊಳಗೆ ಪ್ರವೇಶಿಸಿದೆ. ತೋಟದಲ್ಲಿದ್ದ ಕಾಫಿ, ಅಡಿಕೆ, ಬಾಳೆ, ಏಲಕ್ಕಿ ಬೆಳೆಯನ್ನು ತುಳಿದು ನಾಶಗೊಳಿಸಿದ್ದು, ಎರಡು ಗಂಟೆಗೂ ಅಧಿಕ ಕಾಲ ಕಾಫಿ ತೋಟದೊಳಗೆ ಸಂಚರಿಸಿ ನಷ್ಟ ಉಂಟು ಮಾಡಿದೆ.