ಭಾನುವಾರ ತಡರಾತ್ರಿ ಹಂಸೆ ಗ್ರಾಮಕ್ಕೆ ಬಂದ ಕಾಡಾನೆಗಳು, ಹಳಸೆಯಿಂದ ಕುನ್ನಳ್ಳಿ, ಛತ್ರಮೈದಾನ ಮಾರ್ಗವಾಗಿ, ಬೀಜುವಳ್ಳಿಗೆ ಬಂದಿದ್ದು, ಸುಮಾರು 11.30 ರ ಸುಮಾರಿಗೆ ಮೂಡಿಗೆರೆ – ಬೇಲೂರು ರಾಜ್ಯ ಹೆದ್ದಾರಿಯನ್ನು ದಾಟಿವೆ. ಬಳಿಕ ಮೇಗಲಪೇಟೆಯ ಜೆನಿತ್ ಶಾಮಿಲ್ ಹಿಂಭಾಗಕ್ಕೆ ಬಂದ ಮೂರು ಕಾಡಾನೆಗಳು ಹಲವು ರೈತರ ಕಾಫಿ ತೋಟಗಳಲ್ಲಿ ತಿರುಗಾಡಿ ವೇಣುಗೋಪಾಲ್ ಎಂಬುವವರ ಮನೆಯ ಗೇಟನ್ನು ಮುರಿದು ಹೆದ್ದಾರಿಗೆ ಇಳಿದಿವೆ. ಹೆದ್ದಾರಿಯಲ್ಲಿ ಸುಮಾರು 200 ಮೀ. ನಷ್ಟು ಸಂಚರಿಸಿರುವ ಕಾಡಾನೆಗಳು, ನವರತ್ನ ಪೆಟ್ರೋಲ್ ಬಂಕ್ ಪಕ್ಕದ ಕಾಫಿ ತೋಟದಲ್ಲಿ ಸಂಚರಿಸಿ ಹೆಸ್ಗಲ್ ಗ್ರಾಮಕ್ಕೆ ಬಂದಿದ್ದು, ಬೆಳ್ಳಿಗ್ಗೆ ಹಳ್ಳದಗಂಡಿ ಮೂಲಕ ತತ್ಕೊಳ ಮೀಸಲು ಅರಣ್ಯಕ್ಕೆ ತೆರಳಿವೆ.