ಬಾಳೆಹೊನ್ನೂರು: ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಈಚೆಗೆ ನಡೆಯಿತು.
ಇನ್ನರ್ವೀಲ್ ಕ್ಲಬ್ನ ಮಾಜಿ ಅಧ್ಯಕ್ಷೆ ಸಮತಾ ಮಿಸ್ಕಿತ್ ಮಾತನಾಡಿ, ‘ವಿದ್ಯಾರ್ಥಿ ಹಂತದಲ್ಲಿ ಉತ್ತಮ ಸಾಧನೆ ಮಾಡಿದಲ್ಲಿ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ’ಎಂದರು.
ಕಾಲೇಜಿನ ಎನ್.ಎಸ್. ಎಸ್ ಸಂಯೋಜನಾಧಿಕಾರಿ ಸಿ.ವಿ. ಸುನಿಲ್ ಮಾತನಾಡಿದರು. ಅಂತಿಮ ಪದವಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಪ್ರಾಂಶುಪಾಲೆ ರೀನಾ ಡಿಕುನ್ಹ, ಪ್ರಕೃತಿ, ಜೀವಿತಾ, ಸ್ನೇಹಾ, ರಾಧಿಕಾ ಇದ್ದರು.