ದಾಖಲೆಯಲ್ಲಿ ಮಾತ್ರ ಕಳೆ ಕಿತ್ತಿದ್ದಾರೆ: ತೋಟದೂರು ವ್ಯಾಪ್ತಿಯಲ್ಲಿ ಸುಮಾರು ₹ 7.33 ಲಕ್ಷ ವ್ಯಯಿಸಿ 12.86 ಹೆಕ್ಟೇರ್ ಜಾಗದಲ್ಲಿ ಲಂಟಾನ ನಿರ್ಮೂಲನೆ ಮಾಡಿದ್ದು, ಗ್ರಾಮದ ಯಾರಿಗೂ ಕಂಡು ಬಂದಿಲ್ಲ. ದಾಖಲೆಯಲ್ಲಿ ಮಾತ್ರ ಮಾಡಿ ಹಣ ಜೇಬಿಗೆ ಇಳಿಸಿರಬಹುದು ಎಂಬುದು ನಮ್ಮ ಅನುಮಾನ. 1978, 80ರಲ್ಲಿ ಯಪಟೋರಿಯಂ, ಲಂಟಾನ ಬಾರಿ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಆದರೆ, ಇತ್ತೀಚೆಗೆ ಹುಲ್ಲನ್ನು ಮೀರಿ ಬೆಳೆಯುವ ಕಳೆಯಾಗಿ ಕಂಡು ಬಂದಿಲ್ಲ. ಅಲ್ಲೊಂದು ಇಲ್ಲೊಂದು ಗಿಡ ಇರುವುದು ಜೀವ ವೈವಿಧ್ಯದ ಭಾಗ. ಈ ಗಿಡಗಳು ಬೇರೆ ಗಿಡಗಳಿಗೆ, ಜೀವವೈವಿಧ್ಯಕ್ಕೆ ಧಕ್ಕೆ ತರುವುದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ’ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಗಜೇಂದ್ರ ಗೊರಸುಕೊಡಿಗೆ ಒತ್ತಾಯಿಸಿದ್ದಾರೆ.