ಕಳೆದ ವರ್ಷ ಸುರಿದ ನಿರಂತರ ಮಳೆಯಿಂದಾಗಿ ಬೆಟ್ಟ ಶ್ರೇಣಿಯ ಅಲ್ಲಲ್ಲಿ ಮಣ್ಣು ಕುಸಿದಿದೆ. ರಸ್ತೆ ಬದಿಯಲ್ಲಿ ನೀರು ಹರಿಯಲು ವ್ಯವಸ್ಥಿತವಾಗಿ ಮೋರಿ ನಿರ್ಮಿಸಿಲ್ಲ. ಕೆಲವು ಕಡೆ ರಸ್ತೆ ಅಂಚಿನ ಡಾಂಬರು ಹಾಳಾಗಿದೆ. ಕೆಲವೆಡೆ ಗುಂಡಿಗಳಾಗಿವೆ. ಕೆಲವೆಡೆ ಸೇತುವೆಗಳು ಹಾಳಾಗಿವೆ. ಹಲವು ಕಡೆ ತಗ್ಗು,ದಿಬ್ಬ ಗುಂಡಿಗಳಾಗಿವೆ. ಚಂದ್ರದ್ರೋಣ ಪರ್ವತ ಶ್ರೇಣಿಯು ಕಾಫಿನಾಡಿನ ರಮಣೀಯ ಪ್ರವಾಸಿ ತಾಣಗಳ ಬೀಡು. ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ಹೊನ್ನಮ್ಮನಹಳ್ಳ, ಬಾಬಾಬುಡನ್ ಗಿರಿ, ಮಾಣಿಕ್ಯ ಧಾರಾ, ಗಾಳಿ ಕೆರೆ ಮೊದಲಾದ ತಾಣಗಳು ಈ ಭಾಗದಲ್ಲಿ ಇವೆ.