<p><strong>ಚಿಕ್ಕಮಗಳೂರು:</strong> ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ ವರ್ಷ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನೇ 2019–20ನೇ ಸಾಲಿಗೂ ಮುಂದುವರಿಸುವಂತೆ ಆದೇಶ ಹೊರಡಿಸಲಾಗಿದೆ. ಇದು ಕಳೆದ ಸಾಲನ್ನು ಹೊರತುಪಡಿಸಿ ಈ ಹಿಂದೆ ಹಲವು ವರ್ಷ ಕಾರ್ಯನಿರ್ವಹಿಸಿ, ಈ ಸಲ ಅರ್ಜಿ ಸಲ್ಲಿಸಿದ್ದವರಿಗೆ ಆದೇಶ ‘ಕಂಟಕ’ವಾಗಿ ಪರಿಣಮಿಸಿದೆ.</p>.<p>ಕಾಲೇಜು ಶಿಕ್ಷಣ ಇಲಾಖೆ ಇದೇ 9ರಂದು ಈ ಆದೇಶ ಹೊರಡಿಸಿದೆ. 2018–19ನೇ ಸಾಲಿಗೂ ಹಿಂದೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರು ಪರಿತಪಿಸುವಂತಾಗಿದೆ.</p>.<p>ಕಳೆದ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರ ಮುಂದುವರಿಕೆ ನಂತರವೂ ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರ ಲಭ್ಯ ಇದ್ದರೆ, ಪೂರ್ಣಕಾಲಿಕ ಉಪನ್ಯಾಸಕರ ವರ್ಗಾವಣೆ, ನಿಯೋಜನೆ ನಂತರವೂ ಕಾರ್ಯಭಾರ ಲಭ್ಯ ಇದ್ದರೆ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಪರಿಗಣಿಸುವಂತೆ ಸೂಚಿಸಲಾಗಿದೆ.</p>.<p>ಜೂನ್ 3ರಂದು ಮೊದಲ ಸುತ್ತೋಲೆ ಪ್ರಕಟಿಸಲಾಗಿತ್ತು. ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಶೇ 35 (ಗರಿಷ್ಠ 35 ಅಂಕ) ಗಣನೆ, ಪಿಎಚ್.ಡಿ– 15 ಅಂಕ, ಎನ್ಇಟಿ–ಎಸ್ಇಟಿ –12 ಅಂಕ, ಎಂ.ಫಿಲ್–8 ಅಂಕ, ಅತಿಥಿ ಉಪನ್ಯಾಸಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅವಧಿ ವರ್ಷಕ್ಕೆ 3 ಅಂಕ (ಗರಿಷ್ಠ 10 ವರ್ಷ: 30 ಅಂಕ ), ಅಂಗವಿಕಲರಿಗೆ ಹೆಚ್ಚುವರಿ 10 ಅಂಕ ಮಾನದಂಡದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಪ್ರಕ್ರಿಯೆ ನಡೆಸಲು ತಿಳಿಸಲಾಗಿತ್ತು.</p>.<p>ಜೂನ್ 14ರಂದು ತಿದ್ದುಪಡಿ ಸುತ್ತೋಲೆ ಪ್ರಕಟಿಸಲಾಗಿತ್ತು. ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಶೇ 35 (ಗರಿಷ್ಠ 25 ಅಂಕ) ಗಣನೆ, ಪಿ.ಎಚ್ಡಿ– 12, ಎನ್ಇಟಿ–ಎಸ್ಇಟಿ –09 ಅಂಕ, ಎಂ.ಫಿಲ್–6, ಅತಿಥಿ ಉಪನ್ಯಾಸಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅವಧಿ ವರ್ಷಕ್ಕೆ 3 ಅಂಕ (ಗರಿಷ್ಠ 16 ವರ್ಷ: 48 ಅಂಕ), ಅಂಗವಿಕಲರಿಗೆ ಹೆಚ್ಚುವರಿ 10 ಅಂಕ ನಿಗದಿಪಡಿಸಿ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡಲಾಗಿತ್ತು.</p>.<p>ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು.</p>.<p>‘ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕನಾಗಿ 11 ವರ್ಷ ಬೋಧಿಸಿದ್ದೇನೆ. ಕಳೆದ ವರ್ಷ ಕಾರ್ಯನಿರ್ವಹಿಸಿದವರನ್ನೇ ಮುಂದುವರಿಸಲು ಆದೇಶ ಮಾಡಿರುವುದು ಅರ್ಜಿ ಸಲ್ಲಿಸಿದ್ದವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಾನದಂಡ ಆಧರಿಸಿ ಪ್ರಕ್ರಿಯೆ ನಡೆಸಬೇಕಿತ್ತು’ ಎಂದು ಶಿವಮೊಗ್ಗದ ಬಿ. ಮಂಜನಾಯಕ್ ದೂರಿದರು.</p>.<p>‘ಯಾವ ಆಧಾರದಲ್ಲಿ ಮುಂದುವರಿಸಲಾಗಿದೆ ಎಂಬ ಕುರಿತು ಸ್ಪಷ್ಟತೆ ಇಲ್ಲ. ಕಾರ್ಯನಿರ್ವಹಣೆ ಹಿರಿತನ ಪರಿಗಣಿತವಾಗಿಲ್ಲ. ಈ ಆಯ್ಕೆ ಪ್ರಕ್ರಿಯೆಯು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. 10 ವರ್ಷ ವಾಣಿಜ್ಯ ವಿಷಯದ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ’ ಎಂದು ಕೊಪ್ಪದ ಸಿ.ಎಚ್. ಪ್ರಕಾಶ್ ದೂಷಿಸಿದರು.</p>.<p>ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ದೂರವಾಣಿ ಕರೆ ಮಾಡಿದರೂ ಇಲಾಖೆ ಆಯುಕ್ತರು ಸ್ವೀಕರಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ ವರ್ಷ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನೇ 2019–20ನೇ ಸಾಲಿಗೂ ಮುಂದುವರಿಸುವಂತೆ ಆದೇಶ ಹೊರಡಿಸಲಾಗಿದೆ. ಇದು ಕಳೆದ ಸಾಲನ್ನು ಹೊರತುಪಡಿಸಿ ಈ ಹಿಂದೆ ಹಲವು ವರ್ಷ ಕಾರ್ಯನಿರ್ವಹಿಸಿ, ಈ ಸಲ ಅರ್ಜಿ ಸಲ್ಲಿಸಿದ್ದವರಿಗೆ ಆದೇಶ ‘ಕಂಟಕ’ವಾಗಿ ಪರಿಣಮಿಸಿದೆ.</p>.<p>ಕಾಲೇಜು ಶಿಕ್ಷಣ ಇಲಾಖೆ ಇದೇ 9ರಂದು ಈ ಆದೇಶ ಹೊರಡಿಸಿದೆ. 2018–19ನೇ ಸಾಲಿಗೂ ಹಿಂದೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರು ಪರಿತಪಿಸುವಂತಾಗಿದೆ.</p>.<p>ಕಳೆದ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರ ಮುಂದುವರಿಕೆ ನಂತರವೂ ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರ ಲಭ್ಯ ಇದ್ದರೆ, ಪೂರ್ಣಕಾಲಿಕ ಉಪನ್ಯಾಸಕರ ವರ್ಗಾವಣೆ, ನಿಯೋಜನೆ ನಂತರವೂ ಕಾರ್ಯಭಾರ ಲಭ್ಯ ಇದ್ದರೆ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಪರಿಗಣಿಸುವಂತೆ ಸೂಚಿಸಲಾಗಿದೆ.</p>.<p>ಜೂನ್ 3ರಂದು ಮೊದಲ ಸುತ್ತೋಲೆ ಪ್ರಕಟಿಸಲಾಗಿತ್ತು. ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಶೇ 35 (ಗರಿಷ್ಠ 35 ಅಂಕ) ಗಣನೆ, ಪಿಎಚ್.ಡಿ– 15 ಅಂಕ, ಎನ್ಇಟಿ–ಎಸ್ಇಟಿ –12 ಅಂಕ, ಎಂ.ಫಿಲ್–8 ಅಂಕ, ಅತಿಥಿ ಉಪನ್ಯಾಸಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅವಧಿ ವರ್ಷಕ್ಕೆ 3 ಅಂಕ (ಗರಿಷ್ಠ 10 ವರ್ಷ: 30 ಅಂಕ ), ಅಂಗವಿಕಲರಿಗೆ ಹೆಚ್ಚುವರಿ 10 ಅಂಕ ಮಾನದಂಡದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಪ್ರಕ್ರಿಯೆ ನಡೆಸಲು ತಿಳಿಸಲಾಗಿತ್ತು.</p>.<p>ಜೂನ್ 14ರಂದು ತಿದ್ದುಪಡಿ ಸುತ್ತೋಲೆ ಪ್ರಕಟಿಸಲಾಗಿತ್ತು. ಸ್ನಾತಕೋತ್ತರ ಪದವಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಶೇ 35 (ಗರಿಷ್ಠ 25 ಅಂಕ) ಗಣನೆ, ಪಿ.ಎಚ್ಡಿ– 12, ಎನ್ಇಟಿ–ಎಸ್ಇಟಿ –09 ಅಂಕ, ಎಂ.ಫಿಲ್–6, ಅತಿಥಿ ಉಪನ್ಯಾಸಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅವಧಿ ವರ್ಷಕ್ಕೆ 3 ಅಂಕ (ಗರಿಷ್ಠ 16 ವರ್ಷ: 48 ಅಂಕ), ಅಂಗವಿಕಲರಿಗೆ ಹೆಚ್ಚುವರಿ 10 ಅಂಕ ನಿಗದಿಪಡಿಸಿ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡಲಾಗಿತ್ತು.</p>.<p>ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು.</p>.<p>‘ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕನಾಗಿ 11 ವರ್ಷ ಬೋಧಿಸಿದ್ದೇನೆ. ಕಳೆದ ವರ್ಷ ಕಾರ್ಯನಿರ್ವಹಿಸಿದವರನ್ನೇ ಮುಂದುವರಿಸಲು ಆದೇಶ ಮಾಡಿರುವುದು ಅರ್ಜಿ ಸಲ್ಲಿಸಿದ್ದವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಾನದಂಡ ಆಧರಿಸಿ ಪ್ರಕ್ರಿಯೆ ನಡೆಸಬೇಕಿತ್ತು’ ಎಂದು ಶಿವಮೊಗ್ಗದ ಬಿ. ಮಂಜನಾಯಕ್ ದೂರಿದರು.</p>.<p>‘ಯಾವ ಆಧಾರದಲ್ಲಿ ಮುಂದುವರಿಸಲಾಗಿದೆ ಎಂಬ ಕುರಿತು ಸ್ಪಷ್ಟತೆ ಇಲ್ಲ. ಕಾರ್ಯನಿರ್ವಹಣೆ ಹಿರಿತನ ಪರಿಗಣಿತವಾಗಿಲ್ಲ. ಈ ಆಯ್ಕೆ ಪ್ರಕ್ರಿಯೆಯು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. 10 ವರ್ಷ ವಾಣಿಜ್ಯ ವಿಷಯದ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ’ ಎಂದು ಕೊಪ್ಪದ ಸಿ.ಎಚ್. ಪ್ರಕಾಶ್ ದೂಷಿಸಿದರು.</p>.<p>ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ದೂರವಾಣಿ ಕರೆ ಮಾಡಿದರೂ ಇಲಾಖೆ ಆಯುಕ್ತರು ಸ್ವೀಕರಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>