<p><strong>ಚಿಕ್ಕಮಗಳೂರು</strong>: ಜಿಲ್ಲೆಯ ಮೂಡಿಗೆರೆಯಿಂದ ಗುತ್ತಿಹಳ್ಳಿನಡುವೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ (ಲಾಸ್ಟ್, ಹಾಲ್ಟ್ ಗಾಡಿ) ಸಂಚಾರವನ್ನು ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಳಿಸಿದ್ದು, ಈವರೆಗೆ ಪುನರಾರಂಭಿಸಿಲ್ಲ. ಈ ಭಾಗದ ಭಾಗದ ಶಾಲಾಕಾಲೇಜು ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು, ಸಾರ್ವಜನಿಕರಿಗೆ ಓಡಾಟಕ್ಕೆ ಅನಾನುಕೂಲವಾಗಿದೆ.</p>.<p>ಸಂಜೆ 6-45 ರ ಸಮಯದಲ್ಲಿ ಲಾಸ್ಟ್ ಬಸ್ ವ್ಯವಸ್ಥೆ ಇತ್ತು. ಮೂಡಿಗೆರೆಯಿಂದ ಹೊರಟ್ಟಿ, ಸಬ್ಬೇನಹಳ್ಳಿ, ಕೋಳೂರು, ಹಳಿಕೆ, ಬೆಟ್ಟಗೆರೆ, ಜಾರಗಲ್, ತ್ರಿಪುರ, ಕೊಟ್ರಕೆರೆ, ಗುತ್ತಿ, ಹೆಸಗೋಡು ಮಾರ್ಗವಾಗಿ ಗುತ್ತಿಹಳ್ಳಿಗೆ ತಲುಪುತ್ತಿತ್ತು.</p>.<p>ಗುತ್ತಿಹಳ್ಳಿಯಲ್ಲಿ ಹಾಲ್ಟ್ ಆಗಿ ಮರದಿನ ಬೆಳಿಗ್ಗೆ 6 ಗಂಟೆಗೆ ಅಲ್ಲಿದ ಹೊರಟು ವಾಪಸ್ ಮಾರ್ಗವಾಗಿ ಮೂಡಿಗೆರೆಗೆ ತಲುಪುತಿತ್ತು. ಈ ಬಸ್ ಸಂಚಾರವು ಈ ಭಾಗದ ಭಾಗದ ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು, ಸಾರ್ವಜನಿಕರಿಗೆ ಬೆಳಿಗ್ಗೆ ಮತ್ತು ಸಂಜೆ ಸಂಚಾರಕ್ಕೆ ಅನುಕೂಲಕವಾಗಿತ್ತು.</p>.<p>ಲಾಕ್ಡೌನ್ ತೆರವುಗೊಳಿಸಲಾಗಿದೆ. ಎಲ್ಲ ಚಟುವಟಿಕೆಗಳು ಬಹುತೇಕ ಸಹಜ ಸ್ಥಿತಿಗೆ ಮರಳಿವೆ. ಶಾಲಾಕಾಲೇಜುಗಳು ಆರಂಭವಾಗಿವೆ. ಗ್ರಾಮೀಣ ಭಾಗದಲ್ಲಿ ಸಾರಿಗೆ ಸಮಸ್ಯೆಯಿಂದಾಗಿ ಪರಿತಪಿಸುವಂತಾಗಿದೆ.</p>.<p><strong>ಗುತ್ತಿಹಳ್ಳಿ ಭಾಗದಲ್ಲಿ ಪ್ರಯಾಣಿಕ ಸಂಚಾರಿ ಖಾಸಗಿ ವಾಹನಗಳ ಕೊರತೆ ಇದೆ. ಲಾಸ್ಟ್ ಬಸ್ ಹಾಗೂ ಫಸ್ಟ್ ಬಸ್ ವ್ಯವಸ್ಥೆ ಪ್ರಯಾಣಿಕರಿಗೆ ಅಗತ್ಯವಾಗಿದೆ. ಮತ್ತೆ ಈ ಭಾಗದಲ್ಲಿ ಹಿಂದಿನ ವೇಳಾಪಟ್ಟಿಯಂತೆ ಬಸ್ ಸಂಚಾರವನ್ನು ಪುನರಾರಂಭಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಕ್ರಮ ವಹಿಸಬೇಕು.</strong></p>.<p><strong>– ಡಾ.ಸಂಪತ್ ಬೆಟ್ಟಗೆರೆ, ಲೇಖಕ, ಪ್ರಯಾಣಿಕರು, ವಿದ್ಯಾರ್ಥಿಗಳು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಜಿಲ್ಲೆಯ ಮೂಡಿಗೆರೆಯಿಂದ ಗುತ್ತಿಹಳ್ಳಿನಡುವೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ (ಲಾಸ್ಟ್, ಹಾಲ್ಟ್ ಗಾಡಿ) ಸಂಚಾರವನ್ನು ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಳಿಸಿದ್ದು, ಈವರೆಗೆ ಪುನರಾರಂಭಿಸಿಲ್ಲ. ಈ ಭಾಗದ ಭಾಗದ ಶಾಲಾಕಾಲೇಜು ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು, ಸಾರ್ವಜನಿಕರಿಗೆ ಓಡಾಟಕ್ಕೆ ಅನಾನುಕೂಲವಾಗಿದೆ.</p>.<p>ಸಂಜೆ 6-45 ರ ಸಮಯದಲ್ಲಿ ಲಾಸ್ಟ್ ಬಸ್ ವ್ಯವಸ್ಥೆ ಇತ್ತು. ಮೂಡಿಗೆರೆಯಿಂದ ಹೊರಟ್ಟಿ, ಸಬ್ಬೇನಹಳ್ಳಿ, ಕೋಳೂರು, ಹಳಿಕೆ, ಬೆಟ್ಟಗೆರೆ, ಜಾರಗಲ್, ತ್ರಿಪುರ, ಕೊಟ್ರಕೆರೆ, ಗುತ್ತಿ, ಹೆಸಗೋಡು ಮಾರ್ಗವಾಗಿ ಗುತ್ತಿಹಳ್ಳಿಗೆ ತಲುಪುತ್ತಿತ್ತು.</p>.<p>ಗುತ್ತಿಹಳ್ಳಿಯಲ್ಲಿ ಹಾಲ್ಟ್ ಆಗಿ ಮರದಿನ ಬೆಳಿಗ್ಗೆ 6 ಗಂಟೆಗೆ ಅಲ್ಲಿದ ಹೊರಟು ವಾಪಸ್ ಮಾರ್ಗವಾಗಿ ಮೂಡಿಗೆರೆಗೆ ತಲುಪುತಿತ್ತು. ಈ ಬಸ್ ಸಂಚಾರವು ಈ ಭಾಗದ ಭಾಗದ ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು, ಸಾರ್ವಜನಿಕರಿಗೆ ಬೆಳಿಗ್ಗೆ ಮತ್ತು ಸಂಜೆ ಸಂಚಾರಕ್ಕೆ ಅನುಕೂಲಕವಾಗಿತ್ತು.</p>.<p>ಲಾಕ್ಡೌನ್ ತೆರವುಗೊಳಿಸಲಾಗಿದೆ. ಎಲ್ಲ ಚಟುವಟಿಕೆಗಳು ಬಹುತೇಕ ಸಹಜ ಸ್ಥಿತಿಗೆ ಮರಳಿವೆ. ಶಾಲಾಕಾಲೇಜುಗಳು ಆರಂಭವಾಗಿವೆ. ಗ್ರಾಮೀಣ ಭಾಗದಲ್ಲಿ ಸಾರಿಗೆ ಸಮಸ್ಯೆಯಿಂದಾಗಿ ಪರಿತಪಿಸುವಂತಾಗಿದೆ.</p>.<p><strong>ಗುತ್ತಿಹಳ್ಳಿ ಭಾಗದಲ್ಲಿ ಪ್ರಯಾಣಿಕ ಸಂಚಾರಿ ಖಾಸಗಿ ವಾಹನಗಳ ಕೊರತೆ ಇದೆ. ಲಾಸ್ಟ್ ಬಸ್ ಹಾಗೂ ಫಸ್ಟ್ ಬಸ್ ವ್ಯವಸ್ಥೆ ಪ್ರಯಾಣಿಕರಿಗೆ ಅಗತ್ಯವಾಗಿದೆ. ಮತ್ತೆ ಈ ಭಾಗದಲ್ಲಿ ಹಿಂದಿನ ವೇಳಾಪಟ್ಟಿಯಂತೆ ಬಸ್ ಸಂಚಾರವನ್ನು ಪುನರಾರಂಭಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಕ್ರಮ ವಹಿಸಬೇಕು.</strong></p>.<p><strong>– ಡಾ.ಸಂಪತ್ ಬೆಟ್ಟಗೆರೆ, ಲೇಖಕ, ಪ್ರಯಾಣಿಕರು, ವಿದ್ಯಾರ್ಥಿಗಳು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>