ಹೇಮಾವತಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಉಗ್ಗೆಹಳ್ಳಿ ಗ್ರಾಮದಲ್ಲಿ ತಡೆಗೋಡೆಗೆ ಅಪ್ಪಳಿಸುವ ಭೀತಿ ಇದೆ. ಮುಗ್ರಹಳ್ಳಿ, ಹೊರಟ್ಟಿ, ಸಬ್ಬೇನಹಳ್ಳಿ, ಕಿತ್ತಲೆಗಂಡಿ, ಕೆಸವೊಳಲು ಗ್ರಾಮದ ಬಳಿ ಹೇಮಾವತಿಯು ಗದ್ದೆ ಬಯಲಿಗೆ ವ್ಯಾಪಿಸಿದ್ದು, ನಾಟಿಗಾಗಿ ಉಳುಮೆ ಮಾಡಿದ್ದ ಭತ್ತದ ಗದ್ದೆಗಳಿಗೆಲ್ಲಾ ಹಾನಿಯಾಗಿದೆ.