ಈ ಚುನಾವಣೆಯಲ್ಲಿ ಬಿಜೆಪಿಯೊಳಗೆ ಕೆಜೆಪಿ ವಿಲೀನವಾಗಿದ್ದರಿಂದ, ತಮ್ಮ ಗೆಲುವಿನ ಹಾದಿ ಬಲು ಸುಲಭ ಎಂದು ಚಿಕ್ಕನಗೌಡ್ರ ಭಾವಿಸಿದ್ದರು. ಆದರೆ, ಅವರು ಅಂದುಕೊಂಡಂತೆ ರಾಜಕೀಯ ಸನ್ನಿವೇಶ ಇರಲಿಲ್ಲ. ಅಲ್ಲದೆ, ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದ ಎಂ.ಆರ್. ಪಾಟೀಲ ಅವರ ಮುನಿಸು ಕೂಡ, ಚಿಕ್ಕನಗೌಡ್ರ ಸೋಲಿಗೆ ಒಂದು ರೀತಿಯಲ್ಲೂ ಕಾರಣವಾಯಿತು ಎನ್ನುತ್ತಾರೆ ಕುಂದಗೋಳದ ಜನ.