‘ಜನರಲ್ಲಿ ಕೋವಿಡ್-19 ಭೀತಿ ಇದೆ. ತೀವ್ರ ಜ್ವರ, ನಿರಂತರ ಕೆಮ್ಮಿನಿಂದ ಬಾಧಿತರಿಗೆ ಸಾಮಾನ್ಯ ಕೊಠಡಿಯಲ್ಲಿ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಇದು ಇತರ ರೋಗಿಗಳಿಗೆ ಭಯ ಹುಟ್ಟಿಸಿದೆ. ವಿದೇಶ, ಹೊರರಾಜ್ಯ, ಕೋವಿಡ್-19ನ ಯಾವುದೇ ಲಕ್ಷಣವುಳ್ಳವರಿಗೆ ಐಸೋಲೇಷನ್ ವಾರ್ಡ್ ತೆರೆದು, ಅಲ್ಲಿಯೇ ಚಿಕಿತ್ಸೆ ನೀಡಬೇಕು’ ಎಂದು ಚೇತನ್ ಆಗ್ರಹಿಸಿದ್ದಾರೆ.