ತಾಲ್ಲೂಕಿನಾದ್ಯಂತ ಸಂಜೆ ನಾಲ್ಕು ಗಂಟೆಗೆ ಆರಂಭವಾದ ಮಳೆ ರಾತ್ರಿಯವರೆಗೂ ಮುಂದುವರಿಯಿತು. ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪಂಚನಹಳ್ಳಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು. ಪಂಚನಹಳ್ಳಿ, ಸಿಂಗಟಗೆರೆ, ಚೌಳಹಿರಿಯೂರು, ಯಗಟಿ, ಮಲ್ಲೇಶ್ವರ, ಮಚ್ಚೇರಿ, ಕಡೂರು ಪಟ್ಟಣ ಮುಂತಾದೆಡೆ ಬಿರುಸಿನ ಮಳೆಯಾಗಿದೆ.