ಇಂದು ಕೃಷಿಗೆ ಬಂದವರು ಬಹಳ ಅವಸರದ ಮನೋಭಾವವುಳ್ಳವರು. ಬಹುಬೇಗ ಲಾಭ ಪಡೆಯುವ ಆಸೆಯಿರುತ್ತದೆ. ಆದರೆ, ತಾಳ್ಮೆಯಿಂದ ವೈಜ್ಞಾನಿಕವಾಗಿ ಒಂದಿಷ್ಟು ಮಾಹಿತಿ ಪಡೆದು, ಹವಾಮಾನ, ಮಾರುಕಟ್ಟೆ ಅಧ್ಯಯನ ಮಾಡಿ ಸರಿಯಾದ ಸಮಯದಲ್ಲಿ ಮಾಡುವ ಸುಸ್ಥಿರ ಕೃಷಿಯಿಂದ ಆರ್ಥಿಕ ಲಾಭ ಮತ್ತು ನೆಮ್ಮದಿ ಪಡೆಯಬಹುದು. ಕೃಷಿಗೆ ಬರುವ ಯುವಕರು ಸ್ವತಃ ಶ್ರಮ ಹಾಕಬೇಕು. ಕೂಲಿಯಾಳುಗಳನ್ನೇ ನೆಚ್ಚಿಕೊಂಡರೆ ಕೃಷಿ ಕಷ್ಟ ಎನ್ನುವ ಹಾಲಪ್ಪ ಅವರಿಗೆ ತಾಯಿ ಕಮಲಾ ಗಿರೀಶ್ ಅವರ ಮಾರ್ಗದರ್ಶನ ಮತ್ತು ಪತ್ನಿ ಸವಿತಾ ಅವರ ಸಹಕಾರವಿದೆ. ಹಾಲಪ್ಪ ಅವರ ಮೊಬೈಲ್– 98805 55651.