<p><strong>ಕಡೂರು:</strong> ‘ಬೇಸಿಗೆಯಲ್ಲಿ ಜನರನ್ನು ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕ್ರಮ ವಹಿಸಲಾಗುವುದು’ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.</p>.<p>ಯಗಟಿ ಹೋಬಳಿಯ ಕೊತ್ತಿಗೆರೆ ಗ್ರಾಮದಲ್ಲಿ ಶಾಸಕರು ಮತ್ತು ಸಂಸದರ ನಿಧಿಯಲ್ಲಿ ಸ್ಥಾಪಿಸಲಾದ ಶುದ್ಧಗಂಗಾ ಕುಡಿಯುವ ನೀರು ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಈ ಭಾಗದಲ್ಲಿ ಉಳಿಗೆರೆ, ಮುಗಳಿಕಟ್ಟೆಯಲ್ಲಿ ಘಟಕ ಸ್ಥಾಪನೆ ಪ್ರಗತಿಯಲ್ಲಿದೆ. ಕೊತ್ತಿಗೆರೆಯಲ್ಲಿ ಶಾಸಕರ ನಿಧಿಯಲ್ಲಿ ₹9 ಲಕ್ಷ, ಸಂಸದರ ನಿಧಿಯಲ್ಲಿ ₹6 ಲಕ್ಷ ಒಟ್ಟು ₹15 ಲಕ್ಷ ವೆಚ್ಚದಲ್ಲಿ ಶುದ್ಧಗಂಗಾ ಘಟಕವನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ (ಕೆಆರ್ಐಡಿಎಲ್) ನಿರ್ಮಿಸಲಾಗಿದೆ. ಇದೇ ಸಂಸ್ಥೆ ವತಿಯಿಂದ ಮಲ್ಲಾಘಟ್ಟ, ಕಂಚುಕಲ್, ಸಿದ್ದರಾಮನಹಳ್ಳಿ, ರಂಗಪುರ, ಕೆ.ಹೊಸೂರು, ತುರುವನಹಳ್ಳಿ, ಗರ್ಜೆ, ಹಿರೇಬಳ್ಳೇಕೆರೆಯಲ್ಲಿಯೂ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.</p>.<p>ಪಟ್ಟಣಗಳಲ್ಲಿ ಅಮೃತ್ 2, ಗ್ರಾಮೀಣ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದರು.</p>.<p>ಮುಖಂಡ ಶರತ್ ಕೃಷ್ಣಮೂರ್ತಿ ಮಾತನಾಡಿದರು. ಗ್ರಾಮಸ್ಥರಾದ ಮಂಜುನಾಥ್, ಜಯಣ್ಣ, ಉಳಿಗೆರೆ ಪಿಡಿಒ ಸಪ್ನಾ, ಕೆಆರ್ಐಡಿಎಲ್ ಎಂಜಿನಿಯರ್ಗಳಾದ ಗಿರೀಶ್, ಪುನೀತ್, ಗ್ರಾಮಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ‘ಬೇಸಿಗೆಯಲ್ಲಿ ಜನರನ್ನು ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕ್ರಮ ವಹಿಸಲಾಗುವುದು’ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.</p>.<p>ಯಗಟಿ ಹೋಬಳಿಯ ಕೊತ್ತಿಗೆರೆ ಗ್ರಾಮದಲ್ಲಿ ಶಾಸಕರು ಮತ್ತು ಸಂಸದರ ನಿಧಿಯಲ್ಲಿ ಸ್ಥಾಪಿಸಲಾದ ಶುದ್ಧಗಂಗಾ ಕುಡಿಯುವ ನೀರು ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಈ ಭಾಗದಲ್ಲಿ ಉಳಿಗೆರೆ, ಮುಗಳಿಕಟ್ಟೆಯಲ್ಲಿ ಘಟಕ ಸ್ಥಾಪನೆ ಪ್ರಗತಿಯಲ್ಲಿದೆ. ಕೊತ್ತಿಗೆರೆಯಲ್ಲಿ ಶಾಸಕರ ನಿಧಿಯಲ್ಲಿ ₹9 ಲಕ್ಷ, ಸಂಸದರ ನಿಧಿಯಲ್ಲಿ ₹6 ಲಕ್ಷ ಒಟ್ಟು ₹15 ಲಕ್ಷ ವೆಚ್ಚದಲ್ಲಿ ಶುದ್ಧಗಂಗಾ ಘಟಕವನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ (ಕೆಆರ್ಐಡಿಎಲ್) ನಿರ್ಮಿಸಲಾಗಿದೆ. ಇದೇ ಸಂಸ್ಥೆ ವತಿಯಿಂದ ಮಲ್ಲಾಘಟ್ಟ, ಕಂಚುಕಲ್, ಸಿದ್ದರಾಮನಹಳ್ಳಿ, ರಂಗಪುರ, ಕೆ.ಹೊಸೂರು, ತುರುವನಹಳ್ಳಿ, ಗರ್ಜೆ, ಹಿರೇಬಳ್ಳೇಕೆರೆಯಲ್ಲಿಯೂ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.</p>.<p>ಪಟ್ಟಣಗಳಲ್ಲಿ ಅಮೃತ್ 2, ಗ್ರಾಮೀಣ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದರು.</p>.<p>ಮುಖಂಡ ಶರತ್ ಕೃಷ್ಣಮೂರ್ತಿ ಮಾತನಾಡಿದರು. ಗ್ರಾಮಸ್ಥರಾದ ಮಂಜುನಾಥ್, ಜಯಣ್ಣ, ಉಳಿಗೆರೆ ಪಿಡಿಒ ಸಪ್ನಾ, ಕೆಆರ್ಐಡಿಎಲ್ ಎಂಜಿನಿಯರ್ಗಳಾದ ಗಿರೀಶ್, ಪುನೀತ್, ಗ್ರಾಮಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>