ಸೋಪನಕೆರೆ ನಿವಾಸಿ ಅಶೋಕ (33) ಮೃತರು. ಸಿರಿಹೊನ್ನೆ ಎಸ್ಟೇಟ್ನಲ್ಲಿ ಕಾಳು ಮೆಣಸು ಕೊಯ್ಯಲು ಏಣಿ ಬಳಸುವಾಗ ಆಕಸ್ಮಿಕವಾಗಿ ಅದು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಅಶೋಕ್ ಆಸ್ವಸ್ಥಗೊಂಡರು. ತಕ್ಷಣ ಅವರನ್ನು ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಮೃತಪಟ್ಟಿದ್ದಾಗಿ ಮೃತರ ಪತ್ನಿ ಗೀತಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.