ಲಾಕ್ಡೌನ್ ಸಡಿಲಿಕೆಯಾಗಿ ಅಂತರ ರಾಜ್ಯಗಳಿಗೆ ತೆರಳಲು ಅನುಮತಿಯಿದ್ದರೂ, ಅನಕ್ಷರತೆ, ಭಾಷೆ ಸಮಸ್ಯೆಯ ಗೊಂದಲಗಳು ಹಲವು ಕಾರ್ಮಿಕರಿಗೆ ಪಾಸ್ ಪಡೆಯಲು ಅಡ್ಡಿಯಾಗಿದ್ದು, ಅತಂತ್ರರಾಗಿದ್ದಾರೆ. ಊರಿನತ್ತ ಹೊರಟ ಕಾರ್ಮಿಕರನ್ನು ಕೆಲವು ಮಾಲೀಕರು ಪಟ್ಟಣಕ್ಕೆ ತಂದುಬಿಟ್ಟು ಕೈತೊಳೆದುಕೊಂಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಕಾರ್ಮಿಕ ಇಲಾಖೆಯ ಅಧಿಕಾರಿಗಳು ವಲಸೆ ಕಾರ್ಮಿಕರ ನೆರವಿಗೆ ಬಂದು ಊರಿಗೆ ಹೊರಟುನಿಂತ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಬೇಕು ಎಂಬುದು ಒತ್ತಾಯವಾಗಿದೆ.