<p><strong>ಅಜ್ಜಂಪುರ: ಹ</strong>ಣ್ಣುಗಳ ರಾಜನಾಗಿರುವ ಮಾವಿನ ಬೆಳೆ ತಾಲ್ಲೂಕಿನಲ್ಲಿ ಉತ್ತಮವಾಗಿದೆ. ಕಳೆದ ಬಾರಿಗಿಂತ ಇಳುವರಿ ಹೆಚ್ಚಳವಾಗಿರುವುದು, ರೈತರು ಮತ್ತು ವ್ಯಾಪಾರಸ್ಥರಲ್ಲಿ ಹರ್ಷ ಮೂಡಿಸಿದೆ.</p>.<p>ತಾಲ್ಲೂಕಿನ ಸೊಕ್ಕೆ, ತಿಮ್ಮಾಪುರ, ರಂಗಾಪುರ, ಕಲ್ಲುಶೆಟ್ಟಿಹಳ್ಳಿ, ಕರಡಿಪುರ, ಕಾರಣಘಟ್ಟ, ಹುಣಸಘಟ್ಟ ಭಾಗದಲ್ಲಿದೆ. ಇಲ್ಲಿನ ತೋಪುಗಳಲ್ಲಿ ಮಾವು ತುಂಬಿದ್ದು, ಕಣ್ಮನ ಸೆಳೆಯುತ್ತಿದೆ.</p>.<p>ರಸಪೂರಿ, ಬಾದಾಮಿ, ಸಿಂಧೂರ, ತೋತಾಪುರಿ, ನೀಲಂ, ಮಲಗೂಬಾ, ನಾಟಿ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತಿವೆ. ಬೇರೆಲ್ಲ ಹಣ್ಣುಗಳಿಗಿಂತಲೂ ವಿಭಿನ್ನ ರುಚಿ ಹೊಂದಿರುವ ಮಾವು, ಗ್ರಾಹಕರನ್ನು ಸೆಳೆಯುತ್ತದೆ.<br />ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ 30ರಷ್ಟು ಇಳುವರಿ ಅಧಿಕವಾಗಿದೆ. ಅಕಾಲಿಕ ಮಳೆ, ಹೆಚ್ಚಿದ ಇಬ್ಬನಿಯಿಂದಾಗಿ ಹೂ ಕಳಚಿದ್ದರೂ, ಇಳುವರಿ ಮಾತ್ರ ಕೈಕೊಟ್ಟಿಲ್ಲ ಎನ್ನುತ್ತಾರೆ ಕರಡೀಪುರ ಮಾವು ಬೆಳೆಗಾರ ಉಮೇಶ್ ನಾಯ್ಕ.</p>.<p>‘ಮಾವು ಉತ್ತಮವಾಗಿದ್ದರೂ, ಹೆಚ್ಚಿನ ಆದಾಯ ತರುವುದಿಲ್ಲ. ರಸಪೂರಿ, ಬಾದಾಮಿ, ಸಿಂದೂರ ಹಣ್ಣುಗಳಿಗಷ್ಟೇ ಬೇಡಿಕೆ. ಉಳಿದ ಬಗೆಯ ಮಾವಿನ ಹಣ್ಣುಗಳಿಗೆ ಬೇಡಿಕೆ ಇಲ್ಲ. ಚೇಣಿದಾರರು ಪ್ರತಿ ಎಕರೆ ಮಾವಿನ ಹಣ್ಣನ್ನು ₹ 10-15 ಸಾವಿರಕ್ಕೆ ಚೇಣಿ ಪಡೆಯುತ್ತಿದ್ದಾರೆ. ಇದು ಹೇಳಿಕೊಳ್ಳುವಷ್ಟು ಆದಾಯವಲ್ಲ’ ಎನ್ನುತ್ತಾರೆ ಅವರು.</p>.<p>ಆದಾಯದ ಕೊರತೆ, ಲಾಭದ ಪ್ರಮಾಣದಲ್ಲಿ ಇಳಿಮುಖದಿಂದಾಗಿ ರೈತರು, ಮಾವು ಬೆಳೆಯಿಂದ ವಿಮುಖರಾಗಿದ್ದಾರೆ. ಅಡಿಕೆ ಕೃಷಿ ಯತ್ತ ಹೊರಳಿದ್ದಾರೆ. ಹಿಂಗಾರಿನಲ್ಲಿ ತಾಲ್ಲೂಕಿನ ಕೆಲ ರೈತರು, ಹತ್ತಾರು ಎಕರೆಯಲ್ಲಿನ ಮಾವು ತೆಗೆದು ಅಡಿಕೆ ಕೃಷಿಯಲ್ಲಿ ತೊಡಗಿದ್ದಾರೆ.</p>.<p>ಮಹಾರಾಷ್ಟ್ರದಲ್ಲಿ ಮಾವಿಗೆ ಉತ್ತಮ ಮಾರುಕಟ್ಟೆಯಿತ್ತು. ಕೋವಿಡ್-19 ಕಾರಣಕ್ಕೆ ಅಲ್ಲಿಗೆ ಹಣ್ಣು ಹೋಗುವುದು ಬಂದ್ ಆಗಿದೆ. ಸ್ಥಳೀಯವಾಗಿ ಮಾವು ಮಾರಾಟ ಮಾಡಬೇಕಾಗಿದೆ. ಬಿರು ಬೇಸಿಗೆಯಲ್ಲಿ ಮಾವು ತಿನ್ನಲು ಜನ ಹಿಂಜರಿಯುತ್ತಿದ್ದು, ಬೆಲೆ ಕುಸಿತದ ಭೀತಿ ಆವರಿಸಿದೆ ಎನ್ನುತ್ತಾರೆ ಮಾವಿನ ಚೇಣಿ ಮಾಡಿಕೊಂಡಿದ್ದ ಭದ್ರಾವತಿಯ ವ್ಯಾಪಾರಿ ಸಲೀಂ.</p>.<p>ಮಾರುಕಟ್ಟೆ ಕೊರತೆ, ಕಷ್ಟಕರವಾದ ಶೇಖರಣೆ, ಹೆಚ್ಚಿದ ಸಾಗಣೆ ವೆಚ್ಚ, ದಲ್ಲಾಳಿಗಳ ಹಾವಳಿಯಿಂದಾಗಿ ಮಾವು ಬೆಳೆ ನಿರ್ವಹಣೆ ಮತ್ತು ವ್ಯಾಪಾರ ರೈತರಿಗೆ ಹೊರೆಯಾಗಿದ್ದು, ಅನ್ಯ ಬೆಳೆಯತ್ತ ಸಾಗುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಜ್ಜಂಪುರ: ಹ</strong>ಣ್ಣುಗಳ ರಾಜನಾಗಿರುವ ಮಾವಿನ ಬೆಳೆ ತಾಲ್ಲೂಕಿನಲ್ಲಿ ಉತ್ತಮವಾಗಿದೆ. ಕಳೆದ ಬಾರಿಗಿಂತ ಇಳುವರಿ ಹೆಚ್ಚಳವಾಗಿರುವುದು, ರೈತರು ಮತ್ತು ವ್ಯಾಪಾರಸ್ಥರಲ್ಲಿ ಹರ್ಷ ಮೂಡಿಸಿದೆ.</p>.<p>ತಾಲ್ಲೂಕಿನ ಸೊಕ್ಕೆ, ತಿಮ್ಮಾಪುರ, ರಂಗಾಪುರ, ಕಲ್ಲುಶೆಟ್ಟಿಹಳ್ಳಿ, ಕರಡಿಪುರ, ಕಾರಣಘಟ್ಟ, ಹುಣಸಘಟ್ಟ ಭಾಗದಲ್ಲಿದೆ. ಇಲ್ಲಿನ ತೋಪುಗಳಲ್ಲಿ ಮಾವು ತುಂಬಿದ್ದು, ಕಣ್ಮನ ಸೆಳೆಯುತ್ತಿದೆ.</p>.<p>ರಸಪೂರಿ, ಬಾದಾಮಿ, ಸಿಂಧೂರ, ತೋತಾಪುರಿ, ನೀಲಂ, ಮಲಗೂಬಾ, ನಾಟಿ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತಿವೆ. ಬೇರೆಲ್ಲ ಹಣ್ಣುಗಳಿಗಿಂತಲೂ ವಿಭಿನ್ನ ರುಚಿ ಹೊಂದಿರುವ ಮಾವು, ಗ್ರಾಹಕರನ್ನು ಸೆಳೆಯುತ್ತದೆ.<br />ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ 30ರಷ್ಟು ಇಳುವರಿ ಅಧಿಕವಾಗಿದೆ. ಅಕಾಲಿಕ ಮಳೆ, ಹೆಚ್ಚಿದ ಇಬ್ಬನಿಯಿಂದಾಗಿ ಹೂ ಕಳಚಿದ್ದರೂ, ಇಳುವರಿ ಮಾತ್ರ ಕೈಕೊಟ್ಟಿಲ್ಲ ಎನ್ನುತ್ತಾರೆ ಕರಡೀಪುರ ಮಾವು ಬೆಳೆಗಾರ ಉಮೇಶ್ ನಾಯ್ಕ.</p>.<p>‘ಮಾವು ಉತ್ತಮವಾಗಿದ್ದರೂ, ಹೆಚ್ಚಿನ ಆದಾಯ ತರುವುದಿಲ್ಲ. ರಸಪೂರಿ, ಬಾದಾಮಿ, ಸಿಂದೂರ ಹಣ್ಣುಗಳಿಗಷ್ಟೇ ಬೇಡಿಕೆ. ಉಳಿದ ಬಗೆಯ ಮಾವಿನ ಹಣ್ಣುಗಳಿಗೆ ಬೇಡಿಕೆ ಇಲ್ಲ. ಚೇಣಿದಾರರು ಪ್ರತಿ ಎಕರೆ ಮಾವಿನ ಹಣ್ಣನ್ನು ₹ 10-15 ಸಾವಿರಕ್ಕೆ ಚೇಣಿ ಪಡೆಯುತ್ತಿದ್ದಾರೆ. ಇದು ಹೇಳಿಕೊಳ್ಳುವಷ್ಟು ಆದಾಯವಲ್ಲ’ ಎನ್ನುತ್ತಾರೆ ಅವರು.</p>.<p>ಆದಾಯದ ಕೊರತೆ, ಲಾಭದ ಪ್ರಮಾಣದಲ್ಲಿ ಇಳಿಮುಖದಿಂದಾಗಿ ರೈತರು, ಮಾವು ಬೆಳೆಯಿಂದ ವಿಮುಖರಾಗಿದ್ದಾರೆ. ಅಡಿಕೆ ಕೃಷಿ ಯತ್ತ ಹೊರಳಿದ್ದಾರೆ. ಹಿಂಗಾರಿನಲ್ಲಿ ತಾಲ್ಲೂಕಿನ ಕೆಲ ರೈತರು, ಹತ್ತಾರು ಎಕರೆಯಲ್ಲಿನ ಮಾವು ತೆಗೆದು ಅಡಿಕೆ ಕೃಷಿಯಲ್ಲಿ ತೊಡಗಿದ್ದಾರೆ.</p>.<p>ಮಹಾರಾಷ್ಟ್ರದಲ್ಲಿ ಮಾವಿಗೆ ಉತ್ತಮ ಮಾರುಕಟ್ಟೆಯಿತ್ತು. ಕೋವಿಡ್-19 ಕಾರಣಕ್ಕೆ ಅಲ್ಲಿಗೆ ಹಣ್ಣು ಹೋಗುವುದು ಬಂದ್ ಆಗಿದೆ. ಸ್ಥಳೀಯವಾಗಿ ಮಾವು ಮಾರಾಟ ಮಾಡಬೇಕಾಗಿದೆ. ಬಿರು ಬೇಸಿಗೆಯಲ್ಲಿ ಮಾವು ತಿನ್ನಲು ಜನ ಹಿಂಜರಿಯುತ್ತಿದ್ದು, ಬೆಲೆ ಕುಸಿತದ ಭೀತಿ ಆವರಿಸಿದೆ ಎನ್ನುತ್ತಾರೆ ಮಾವಿನ ಚೇಣಿ ಮಾಡಿಕೊಂಡಿದ್ದ ಭದ್ರಾವತಿಯ ವ್ಯಾಪಾರಿ ಸಲೀಂ.</p>.<p>ಮಾರುಕಟ್ಟೆ ಕೊರತೆ, ಕಷ್ಟಕರವಾದ ಶೇಖರಣೆ, ಹೆಚ್ಚಿದ ಸಾಗಣೆ ವೆಚ್ಚ, ದಲ್ಲಾಳಿಗಳ ಹಾವಳಿಯಿಂದಾಗಿ ಮಾವು ಬೆಳೆ ನಿರ್ವಹಣೆ ಮತ್ತು ವ್ಯಾಪಾರ ರೈತರಿಗೆ ಹೊರೆಯಾಗಿದ್ದು, ಅನ್ಯ ಬೆಳೆಯತ್ತ ಸಾಗುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>