ಹಿರೇಮಗಳೂರಿನ ಕೋದಂಡರಾಮ ದೇವಾಲಯದ ಅರ್ಚಕ ಕಣ್ಣನ್ ನೇತೃತ್ವದ ತಂಡವು ಭೂದೇವಿ ಸಹಿತ ಲಕ್ಷ್ಮಿ ವೆಂಕಟೇಶ್ವರ ದೇವರ ಪ್ರತಿಷ್ಠಾಪನೆಗೊಳಿಸಿ, ಸ್ವಸ್ತಿವಾಚನ, ನಾಂದಿ, ವಿಶ್ವಕ್ಷೇನ ಆರಾಧನೆ, ಆಚಾರ್ಯ ಋತ್ವಿಗರಣೆ, ಮಂಗಳದ್ರವ್ಯಪೂಜೆ, ಭೂದೇವಿ ಸಹಿತ ಲಕ್ಷ್ಮಿ ವೆಂಕಟೇಶ್ವರನಿಗೆ ನಿಶ್ಚಿತಾರ್ಥಗಳನ್ನು ನಡೆಸಿ ಬಳಿಕ ಶ್ರೀನಿವಾಸ ತಿರುಕಲ್ಯಾಣೋತ್ಸವವನ್ನು ಮಾಡಿದರು.