ಚಿಕ್ಕಮಗಳೂರು: ಚಿಕ್ಕಮಗಳೂರು ದಿ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇದೇ 27 ಮತ್ತು 28 ರಂದು ರಾಷ್ಟ್ರಮಟ್ಟದ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಕ್ಲಬ್ನ ಕಾರ್ಯದರ್ಶಿ ಬಿ.ಎಚ್.ಅಭಿಜಿತ್ ಪೈ ಗುರುವಾರ ಇಲ್ಲಿ ತಿಳಿಸಿದರು.
27 ರಂದು ಸಂಜೆ 5 ಗಂಟೆಗೆ ಅಲ್ಲಂಪುರದ ಸೆವೆನ್ ಇವನ್ ರೆಸಾರ್ಟ್ನಲ್ಲಿ ರ್ಯಾಲಿಗೆ ಚಾಲನೆ ನೀಡಲಾಗುವುದು. ಎಂಆರ್ಎಫ್ ಮೊಗ್ರಿಪ್ ಎಫ್ಎಂಎಸ್ಸಿಐ ನ್ಯಾಷನಲ್ ಚಾಂಪಿಯನ್ಶಿಪ್ ಬೈಕ್ರ್ಯಾಲಿಯ ಎರಡನೇ ಘಟ್ಟದ ಸ್ಪರ್ಧೆ ಇದು. ಮೊದಲ ಸುತ್ತು ಮೇ 20ಮತ್ತು 21ರಂದು ಕೊಡಗಿನಲ್ಲಿ ನಡೆದಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇಲ್ಲಿ ನಡೆಯುವ ಬೈಕ್ ರ್ಯಾಲಿಯಲ್ಲಿ ಒಟ್ಟು ಎಂಟು ವಿವಿಧ ಹಂತಗಳು ಇವೆ. 28 ರಂದು ಬೆಳಿಗ್ಗೆ 7 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ. ಒಟ್ಟು 138 ಕಿ.ಮೀ ಕ್ರಮಿಸಲಿದೆ ಎಂದು ತಿಳಿಸಿದರು.
ರ್ಯಾಲಿಯಲ್ಲಿ ಡೆಹ್ರಾಡೂನ್ನ ಧ್ರುತಿಮಾನ್ಸಿಂಗ್, ಉತ್ತರಾಖಂಡನ್ ಪ್ರತಾಪ್ ಸಿಂಗ್, ಬೆಂಗಳೂರಿನ ನರೇಶ್, ಅಬ್ದುಲ್ ತನ್ವಿರ್,ಸಚಿನ್, ಊಟಿ ರಷೀದ್ ಖಾದರ್ ಹಾಗೂ ಮಹಿಳಾ ವಿಭಾಗದಿಂದ ಐಶ್ವರ್ಯಾ ಪಿಚ್ಚೈ, ತನಿಕಾ ಶಾನುಭೋಗ್, ಅಪೂರ್ವಾ, ಸ್ನೇಹಾ ರಿಹಾನ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರಿನಿಂದ್ ಅಸದ್ಖಾನ್, ದಿಲೀಪ್ ರಾಜ್, ಕಾರ್ತಿಕ್,ಮಹಮದ್ ಅಜರುದ್ದಿನ್ ಸಹಿತ ಹಲವರು ಸ್ಪರ್ಧೆಯಲ್ಲಿ ಭಾಗವಹಿಸುವರು. ವಿಜೇತರಿಗೆ ₹ 2 ಲಕ್ಷ ನಗದು, ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.
ಕ್ಲಬ್ ಅಧ್ಯಕ್ಷ ಜಯಂತ್ ಪೈ, ಉಪಾಧ್ಯಕ್ಷ ಫಾರೂಕ್ ಅಹಮದ್, ಖಜಾಂಚಿ ದಿಲೀಪ್, ಸಮೃದ್ಧ್ ಪೈ ಇದ್ದರು.