ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿಯ ಸಂಸೆ ಸಮೀಪದ ಬಸರೀಕಲ್ಲು ಅರಣ್ಯ ತಪಾಸಣೆಠಾಣೆಗೆ ನಸುಕಿನ 3 ಗಂಟೆ ಹೊತ್ತಿನಲ್ಲಿ, ನಾಲ್ಕು ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ನಾಲ್ಕರಲ್ಲಿ ಒಂದು ಬೆಂಕಿ ಹೊತ್ತಿಕೊಂಡು ರಟ್ಟಿನ ಪೆಟ್ಟಿಗೆಯಲ್ಲಿದ್ದ ಚೀಟಿಗಳು ಸುಟ್ಟಿವೆ.
ಬಾಟಲಿ ಬಿದ್ದ ಶಬ್ದ ಕೇಳಿ ಸಿಬ್ಬಂದಿ ಠಾಣೆಯಿಂದ ಹೊರಕ್ಕೆ ಓಡಿದ್ದಾರೆ. ಠಾಣೆಯ ಹಿಂಬದಿಯಿಂದ ಎಸೆದಿದ್ದಾರೆ.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಡಿವೈಎಸ್ಪಿ ರಮೇಶ ಜಹಗೀರ್ದಾರ್ ಮತ್ತುಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.