ನರಸಿಂಹರಾಜಪುರ: ರಬ್ಬರ್ ಧಾರಣೆಯಲ್ಲಿ ಏರಿಕೆ ಆಗುತ್ತಿರುವುದು ತಾಲ್ಲೂಕಿನ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ. ಭತ್ತ ಬೆಳೆಯುತ್ತಿದ್ದ ರೈತರು ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾದಾಗ ಭತ್ತದ ಬದಲು ರಬ್ಬರ್ ಬೆಳೆಯಲು ಒಲವು ತೋರಿದ್ದರು. 2013ರಲ್ಲಿ ರಬ್ಬರ್ ಧಾರಣೆ ಕೆಜಿಗೆ ₹250ರವರೆಗೂ ಏರಿಕೆ ಕಂಡಿತ್ತು. ಬೆಲೆ ಹೆಚ್ಚಾದಂತೆ ತಾಲ್ಲೂಕಿನಲ್ಲಿ ರಬ್ಬರ್ ಬೆಳೆಯುವ ಪ್ರದೇಶವೂ ವಿಸ್ತರಣೆಗೊಂಡಿತ್ತು. ಸದ್ಯ 2,799 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ.