ನಗರದ ಓಕಾರೇಶ್ವರ ದೇಗುಲದ ಬಳಿ ಜಮಾಯಿಸಿದ ಸಂಘದ ಸದಸ್ಯರು, ವಿದ್ಯಾರ್ಥಿಗಳು, ಮಹಿಳೆಯರು ಮೊಂಬತ್ತಿ ಹಿಡಿದು ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ನಂತರ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿದರು.
ಮೆರವಣಿಗೆ ಸಾಗುವ ರಸ್ತೆಯಲ್ಲಿ ಅಂಗಡಿಗಳ್ಳಿನ ವಿದ್ಯುತ್ದೀಪ ಆರಿಸುವ ಮೂಲಕ ಅಂಗಡಿ ಮಾಲೀಕರು ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.
ಸಂಘಟನೆ ಸದಸ್ಯರು, ಸಾರ್ವಜನಿಕರು ಆಜಾದ್ ಪಾರ್ಕ್ ವೃತ್ತದಲ್ಲಿ ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ಬಜರಂಗದಳದ ಜಿಲ್ಲಾ ಸಂಚಾಲಕ ತುಡುಕೂರು ಮಂಜು, ಡಾ.ಗೀತಾವೆಂಕಟೇಶ್, ವೀಣಾ ಶೆಟ್ಟಿ ಇದ್ದರು.