ಸಕಾಲದಲ್ಲಿ ಆಂಬುಲೆನ್ಸ್ ಸಿಗದೆ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಾನು ಪಟ್ಟ ಪಾಡು ಮತ್ತೆ ಯಾರಿಗೂ ಬರಬಾರದು ಎಂದು ನಿರ್ಣಯಿಸಿದ ಮಗ, ಸಾರ್ವಜನಿಕರ ಬಳಕೆಗೆ ಉಚಿತವಾಗಿ ಆಂಬುಲೆನ್ಸ್ ಸೇವೆ ಒದಗಿಸುವ ನಿರ್ಧಾರ ಮಾಡಿದರು. ತುರ್ತು ವೈದ್ಯಕೀಯ ನೆರವು ಬೇಕಿರುವ ಬಡವರು ಏನು ಮಾಡಬೇಕು? ಅವರಿಗೆ ಅಗತ್ಯ ಬಿದ್ದ ಕೂಡಲೇ ಆಂಬುಲೆನ್ಸ್ ಸಿಕ್ಕಕ್ಲುಪ್ತ ಸಮಯದಲ್ಲಿ ಆಸ್ಪತ್ರೆ ತಲುಪಬಹುದಲ್ಲವೆ? ಈ ಯೋಚನೆ ಬಂದಿದ್ದು ಕಡೂರು ಪಟ್ಟಣದ ಎಲ್.ಐ.ಸಿ.ಕಚೇರಿ ಬಳಿ ಸಣ್ಣ ಟೀ ಅಂಗಡಿ ಇಟ್ಟುಕೊಂಡಿರುವ ಮಂಜುನಾಥ್ ಅವರಿಗೆ.