ಸ್ಪರ್ಧೆಯಲ್ಲಿ 1,400 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಟ್ಟಣದ ಜ್ಞಾನಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿ ಆದಿತ್ಯ ಡಿ. ಯಾಜಿ (ಪ್ರಥಮ ₹ 5,000), ದರ್ಶಿನಿ ಸಂಯುಕ್ತ ಪ್ರೌಢಶಾಲೆ ವಿದ್ಯಾರ್ಥಿನಿ ಗಾಯತ್ರಿ ಕೆ.ಎಸ್ (ದ್ವಿತೀಯ ₹ 3,500), ಜ್ಞಾನಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಮನೀಷಾ ಜಿ. ಭಟ್ (ತೃತೀಯ ₹ 2,500) ಬಹುಮಾನ ಪಡೆದರು. ಸ್ಪರ್ಧೆ ಆಯೋಜಕರಾದ ಉಮೇಶ್ ಹರಿಹರ, ಶಾರದಾ ಮಠದ ಅಧಿಕಾರಿ ದಕ್ಷಿಣಾಮೂರ್ತಿ ಇದ್ದರು.