ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ನೆಲಸಮ: ಸಂಸದರ ಎದುರು ಬಜರಂಗದಳ, ವಿಎಚ್‌ಪಿ ಕಾರ್ಯಕರ್ತರ ಅಳಲು

Last Updated 16 ಸೆಪ್ಟೆಂಬರ್ 2021, 11:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರದನಹಳ್ಳಿಉಚ್ಚಗಣಿಯಲ್ಲಿ ದೇಗುಲ ನೆಲಸಮಗೊಳಿಸಿದ್ದು ಭಕ್ತರಿಗೆ ನೋವುಂಟುಮಾಡಿದೆ, ದೇಗುಲಗಳನ್ನು ಕೆಡವಬಾರದು ಎಂದು ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಅವರಿಗೆ ಬಜರಂಗದಳ, ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತರು ಒತ್ತಾಯಿಸಿದರು.

ಮೂಡಿಗೆರೆಯ ಕೆಎಸ್‌ಆರ್‌ಟಿಸಿ ನಿಲ್ದಾಣದ ಸನಿಹದಲ್ಲಿ ಸಂಸದರನ್ನು ಕಾರ್ಯಕರ್ತರು ಸುತ್ತುವರಿದರು. ‘ನ್ಯಾಯ ಬೇಕು...’ ಘೋಷಣೆ ಕೂಗಿದರು.

‘ದೇಗುಲ ಕೆಡವಿದ್ದರಿಂದ ನಮ್ಮ ಭಾವನೆಗೆ ನೋವಾಗಿದೆ. ನಮ್ಮ ಅಳಲನ್ನು ಪರಿಗಣಿಸಬೇಕು’ ಎಂದು ಕಾರ್ಯಕರ್ತರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT