ಪಂಚಾಯಿತಿಯ ತುಡುಕೂರು ವಾರ್ಡ್ ಸದಸ್ಯ ಕೌಶಿಕ್ ಮಾತನಾಡಿ, ‘ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿ ಈ ವಾರ್ಡ್ಗೆ ಸಂಬಂಧಪಟ್ಟಿದ್ದಲ್ಲ. ಜೆಜೆಎಂ ಕಾಮಗಾರಿಗೆ ಗ್ರಾಮಸ್ಥರು ಯಾವುದೇ ರೀತಿಯಲ್ಲಿ ಅಡ್ಡಿ ಮಾಡಿಲ್ಲ. ಆದರೆ, ರಸ್ತೆ ಬದಿ ಮಣ್ಣು ಹಾಕಿ ನಿರ್ಲಕ್ಷ್ಯ ಮಾಡಿದ ಪರಿಣಾಮ ರಸ್ತೆ ಕೆಸರುಮಯವಾಗಿದೆ’ ಎಂದರು.