‘ಕಳೆದ ವರ್ಷದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿದೆ. ಮಕ್ಕಿಕೊಪ್ಪದಿಂದ ಬಸರೀಕಟ್ಟೆ ಸೇರಿದಂತೆ ಬಹುತೇಕ ರಸ್ತೆಗಳು ಗುಂಡಿಬಿದ್ದಿದೆ. ಈ ಬಗ್ಗೆ ಪ್ರಶ್ನಿಸಿದರೆ ಶಾಸಕ ರಾಜೇಗೌಡರು ಮಳೆಯಿಂದಾಗಿ ಹಾಳಾಗಿದೆ ಎನ್ನುತ್ತಾರೆ. ಹತ್ತಾರು ವರ್ಷದ ಹಿಂದೆ ಅಭಿವೃದ್ಧಿ ಕಂಡಿದ್ದ ನರಸಿಂಹರಾಜಪುರ, ಬಾಳೆಹೊನ್ನೂರು ನಡುವಿನ ರಸ್ತೆ ಇಂದಿಗೂ ಸುಸ್ಥಿತಿಯಲ್ಲಿದೆ. ಆದರೆ, ರಾಜೇಗೌಡರ ಅವಧಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅಲ್ಲಿ ಮಾತ್ರ ಭಾರಿ ಮಳೆ ಬೀಳುತ್ತದೆಯೇ’ ಎಂದು ವ್ಯಂಗ್ಯವಾಡಿದರು.