<p><strong>ಕಡೂರು:</strong> ತಾಲ್ಲೂಕಿನ ಮಚ್ಚೇರಿಯ ಐತಿಹಾಸಿಕ ಸೌಮ್ಯ ಯೋಗಾನರಸಿಂಹ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.</p>.<p>ಮುಂಜಾನೆ ಮೂಲ ನರಸಿಂಹಸ್ವಾಮಿ, ಶ್ರೀನಿವಾಸ ಹಾಗೂ ರಾಮಾನುಜರ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ ನಡೆಸಲಾಯಿತು. ಆನಂತರ ಉತ್ಸವ ಶ್ರೀನಿವಾಸ ದೇವರನ್ನು ವೈಕುಂಠ ದ್ವಾರದ ಮೇಲೆ ಪ್ರತಿಷ್ಟಾಪಿಸಲಾಯಿತು.</p>.<p>ಸೌಮ್ಯ ಯೋಗಾನರಸಿಂಹ ದೇವರಿಗೆ ಸುವರ್ಣ ನೇತ್ರಾಲಂಕಾರ ಮಾಡಲಾಗಿತ್ತು. ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ, ಶಾತ್ತುಮೊರೈ ಸೇವೆ ನೆರವೇರಿತು. ಸಂಜೆ ಪುನಃ ಸಹಸ್ರನಾಮ, ಅಷ್ಟಾವಧಾನ, ಶಯನೋತ್ಸವ ನಡೆಯಿತು. ಪ್ರಧಾನ ಅರ್ಚಕ ಸುದರ್ಶನ ರಾಮಾನುಜ ಧಾರ್ಮಿಕ ವಿಧಿ ನೆರವೇರಿಸಿದರು.</p>.<p>ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಎಂ.ಕೆ.ತಿಮ್ಮಯ್ಯ, ಉಪಾಧ್ಯಕ್ಷ ಎಂ.ಕೆ.ಸತೀಶ್, ದೇವಸ್ಥಾನ ಸಂಸ್ಥಾಪಕರಾದ ಯತಿರಾಜ ರಾಮಾನುಜ, ಯೋಗಾನರಸಿಂಹ ಇದ್ದರು.</p>.<p>ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿಯೂ ವೈಕುಂಠ ಏಕಾದಶಿ ಸಂಭ್ರಮದಿಂದ ನಡೆಯಿತು. ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸನನ್ನು ಸ್ಥಾಪಿಸಲಾಗಿದ್ದ ವೈಕುಂಠ ದ್ವಾರವನ್ನು ಹಾದು ನೂರಾರು ಭಕ್ತರು ಶ್ರೀನಿವಾಸನ ದರ್ಶನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ತಾಲ್ಲೂಕಿನ ಮಚ್ಚೇರಿಯ ಐತಿಹಾಸಿಕ ಸೌಮ್ಯ ಯೋಗಾನರಸಿಂಹ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.</p>.<p>ಮುಂಜಾನೆ ಮೂಲ ನರಸಿಂಹಸ್ವಾಮಿ, ಶ್ರೀನಿವಾಸ ಹಾಗೂ ರಾಮಾನುಜರ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ ನಡೆಸಲಾಯಿತು. ಆನಂತರ ಉತ್ಸವ ಶ್ರೀನಿವಾಸ ದೇವರನ್ನು ವೈಕುಂಠ ದ್ವಾರದ ಮೇಲೆ ಪ್ರತಿಷ್ಟಾಪಿಸಲಾಯಿತು.</p>.<p>ಸೌಮ್ಯ ಯೋಗಾನರಸಿಂಹ ದೇವರಿಗೆ ಸುವರ್ಣ ನೇತ್ರಾಲಂಕಾರ ಮಾಡಲಾಗಿತ್ತು. ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ, ಶಾತ್ತುಮೊರೈ ಸೇವೆ ನೆರವೇರಿತು. ಸಂಜೆ ಪುನಃ ಸಹಸ್ರನಾಮ, ಅಷ್ಟಾವಧಾನ, ಶಯನೋತ್ಸವ ನಡೆಯಿತು. ಪ್ರಧಾನ ಅರ್ಚಕ ಸುದರ್ಶನ ರಾಮಾನುಜ ಧಾರ್ಮಿಕ ವಿಧಿ ನೆರವೇರಿಸಿದರು.</p>.<p>ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಎಂ.ಕೆ.ತಿಮ್ಮಯ್ಯ, ಉಪಾಧ್ಯಕ್ಷ ಎಂ.ಕೆ.ಸತೀಶ್, ದೇವಸ್ಥಾನ ಸಂಸ್ಥಾಪಕರಾದ ಯತಿರಾಜ ರಾಮಾನುಜ, ಯೋಗಾನರಸಿಂಹ ಇದ್ದರು.</p>.<p>ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿಯೂ ವೈಕುಂಠ ಏಕಾದಶಿ ಸಂಭ್ರಮದಿಂದ ನಡೆಯಿತು. ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸನನ್ನು ಸ್ಥಾಪಿಸಲಾಗಿದ್ದ ವೈಕುಂಠ ದ್ವಾರವನ್ನು ಹಾದು ನೂರಾರು ಭಕ್ತರು ಶ್ರೀನಿವಾಸನ ದರ್ಶನ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>