ಅಜ್ಜಂಪುರ: ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದ ಯೋಗ ನರಸಿಂಹ ದೇವಾಲಯದ ಕಲಾಕರ್ಶಣೆ ಕಾಮಗಾರಿಗೆ ದೇವಾಲಯ ಅಭಿವೃದ್ಧಿ ಸಂಘ ಅಧ್ಯಕ್ಷ ಅನಂತ್ ಭೂಮಿ ಪೂಜೆ ನಡೆಸಿದರು.
ಬಳಿಕ ಮಾತನಾಡಿದ ಅವರು, ೀ ದೇವಾಲಯ 12 ನೇ ಶತಮಾನದಲ್ಲಿ ಹೊಯ್ಸಳರಿಂದ ನಿರ್ಮಾಣಗೊಂಡಿತ್ತು. ಶಿಥಿಲಾವಸ್ಥೆಗೆ ಜಾರುತ್ತಿತ್ತು. ಹಿಂದಿನ ಕಲಾ-ವಾಸ್ತುಶಿಲ್ಪ ಉಳಿಸಲು, ಪುರಾತನ ದೇವಾಲಯ ರಕ್ಷಿಸಲು ನಿರ್ಧರಿಸಲಾಯಿತು. ಅದಕ್ಕಾಗಿ ಸಂಘ ಮೂರು ವರ್ಷದಿಂದ ಕಾರ್ಯೋನ್ಮುಖವಾಗಿತ್ತು ಎಂದರು.
ಸಂಘದ ಕಾರ್ಯದರ್ಶಿ ಶಾಂತಪ್ಪ, ದೇವಾಲಯ ಪುನರ್ ನವೀಕರಣಕ್ಕೆ ₹1.55 ಕೋಟಿ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಆರಂಭವಾಗಿದೆ ಎಂದರು.
ಶೃಂಗೇರಿ ಶಂಕರ ಮಠದ ಲಕ್ಷ್ಮೀನಾರಾಯಣ ಸೋಮಯಾಜಿ, ಪುರೋಹಿತ ರಾಘವೇಂದ್ರ ಶರ್ಮ, ನಾಗೇಶ್ ಉಡಾಳ, ಕುಮಾರಸ್ವಾಮಿ, ಪುರುಷೋತ್ತಮ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು.
ರಾಜ್ಯ ಪುರಾತತ್ವ ಇಲಾಖೆಯ ಮೈಸೂರು ಘಟಕ ಎಂಜಿನಿಯರ್ ಕುಬೇರಪ್ಪ, ದೇವಾಲಯ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಶಾಂತಪ್ಪ, ಪ್ರಸನ್ನ ಕುಮಾರ್, ಸದಸ್ಯ ಗಿರೀಶ್, ಪ್ರಸಾದ್, ಕುಮಾರಸ್ವಾಮಿ, ಪ್ರಭುಕುಮಾರ್ ಇದ್ದರು