ಚಿಕ್ಕಮಗಳೂರು: ‘ನನ್ನನ್ನು ಮುಲ್ಲಾ ಎಂದು ಕರೆಯಲಾಗದು, ಹಿಂದೂ ಹುಲಿ ಎಂದು ಕರೆಯಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ‘ಶಾದಿ ಭಾಗ್ಯ ಕೊಟ್ಟವರಿಗೆ, ಟೋಪಿಯನ್ನು ಪ್ರೀತಿಯಿಂದ ಹಾಕಿಕೊಳ್ಳುವವರಿಗೆ, ‘ದೇ ಆರ್ ಆಲ್ ಮೈ ಬ್ರದರ್ಸ್’ ಎನ್ನುವವರಿಗೆ, ಬೆಂಕಿ ಹಚ್ಚಿದರೂ ಅಮಾಯಕರು ಎಂದು ಹೇಳುವವರಿಗೆ ಅದೆಲ್ಲ ಕನೆಕ್ಟ್ ಆಗುತ್ತೆ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಛೇಡಿಸಿದರು.
‘ನಮ್ಮ ಸ್ವಭಾವ, ನಡವಳಿಕೆಗೆ ತಕ್ಕಂತೆ ಕರೆಯುತ್ತಾರೆ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ಹೊಂದುತ್ತವೆ’ ಎಂದು ಕುಟುಕಿದರು.