ಚಿಕ್ಕಮಗಳೂರು: ಮಹಿಳೆಯರು ಇತ್ತೀಚೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸಿದ್ದಾರೆ ಎಂದು ಗಾಯತ್ರಿ ಮಹಿಳಾಮಂಡಳಿ ಸಂಸ್ಥಾಪಕ ಅಧ್ಯಕ್ಷೆ ಗಿರಿಜಾರಾಮಸ್ವಾಮಿ ಹೇಳಿದರು.
ಗಾಯತ್ರಿ ಮಹಿಳಾಮಂಡಳಿ ವತಿಯಿಂದ ಈಚೆಗೆ ನಗರದ ಬ್ರಹ್ಮ ಸಮುದ್ರ ರಂಗಣ್ಣ ಛತ್ರದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇನೆ, ಉದ್ಯಮ, ಶಿಕ್ಷಣ, ರಾಜಕೀಯ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಉತ್ತಮ ಸಾಧನೆ ತೋರುತ್ತಿದ್ದಾರೆ. ಸಂಸಾರ ನಿಭಾಯಿಸುವ ಜತಗೆ ಸಮಾಜ ಮುಖಿ ಕಾರ್ಯಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಸಂಘದ ಬನಶಂಕರಿ ಜೋಷಿ, ಸೌಭಾಗ್ಯ ಶೇಷಾದ್ರಿ , ರಾಜಲಕ್ಷ್ಮಿ ಇದ್ದರು.