ರಾಜ್ಯ ಸರ್ಕಾರದ ವತಿಯಿಂದ ರಾಮಾನುಜಾಚಾರ್ಯರ ಜಯಂತ್ಯು ತ್ಸವವನ್ನು ಆಚರಿಸಬೇಕು. ವೈಷ್ಣವ ಜನಾಂಗಕ್ಕೆ ಆರ್ಥಿಕತೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಹಾಗೂ ಅಲ್ಪಸಂಖ್ಯಾತರೆಂದು ಪರಿಗಣಿಸಬೇಕು. ಸರ್ಕಾರದಿಂದ ನಿವೇಶನ ಮತ್ತು ಮನೆ ಒದಗಿಸಬೇಕು. ಜಿಲ್ಲಾ ಕೇಂದ್ರಗಳಲ್ಲಿ ಆಗಮ ಪಾಠಶಾಲೆ ತೆರೆಯಬೇಕು, ರಾಮಾನುಜ ಭವನ ನಿರ್ಮಿಸಬೇಕು, ಸಮುದಾಯದ ಅರ್ಚಕರಿಗೆ ಕೂಡಲೇ ತಸ್ತಿಕ್ ಹಣ ನೀಡಬೇಕು, ಯತಿರಾಜ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾಪನೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 10 ಎಕರೆ ಜಾಗ ನೀಡಬೇಕು. ವೈಷ್ಣವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.