ಹುತ್ತ ಅಲುಗಾಡಿದ ನಂತರ ಉಪವಾಸ ವ್ರತ ಕೈಗೊಂಡಿದ್ದ ಗೋಪಾಲಕನ ನೇತೃತ್ವದಲ್ಲಿ ಕರುವನ್ನು ತಂದು ಕಿವಿ ಚುಚ್ಚಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ನಡೆಸಲಾಯಿತು. ಕರುವಿನ ಮೇಲೆ ಪುರಿ ಎರಚುವ ಮೂಲಕ ಭಕ್ತರು ಹರಕೆ ಸಮರ್ಪಿಸಿದರು. ಬಾನಹಳ್ಳಿ, ಬಗ್ಗಸಗೋಡು, ಚಕ್ಕಮಕ್ಕಿ, ಹೊರಟ್ಟಿ, ಕೆಂಜಿಗೆ ಸೇರಿದಂತೆ ವಿವಿಧ ಗ್ರಾಮಗಳ ಜನತೆ ಜಾತ್ರೆ ಉತ್ಸವದಲ್ಲಿ ಪಾಲ್ಗೊಂಡಿದ್ದರು.