ಮೊದಲು ದೂರು ಸಲ್ಲಿಸುವವರ ಪರವಾಗಿ ಇಲಾಖೆ ಅಧಿಕಾರಿಗಳು ವರ್ತಿಸುವ ಮನೋಭಾವ ಬದಲಾಗಿ ದೂರು ಬಂದ ನಂತರ ತಾಳ್ಮೆ ಮತ್ತು ಸಹನೆಯಿಂದ ತನಿಖೆ ಕೈಗೊಂಡು ಸಮಸ್ಯೆ ಪರಿಹರಿಸುವಲ್ಲಿ ಮುಂದಾದಾಗ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಪ್ರಕರಣಗಳನ್ನು ತಡೆಯಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ವಕೀಲ ಬಿ.ಎಚ್.ಭಾಸ್ಕರ್, ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಶಿವಪ್ರಸಾದ್, ಡಿವೈಎಸ್ ಪಿ ಚಿದಾನಂದ ಸ್ವಾಮಿ, ಆರಕ್ಷಕ ವೃತ್ತ ನಿರೀಕ್ಷಕ ಷರೀಫ್, ಆರಕ್ಷಕ ನಿರೀಕ್ಷಕ ಸುರೇಶ್, ವಕೀಲ ಸುರೇಶ್ಚಂದ್ರ ಇದ್ದರು.