<p><strong>ಚಿತ್ರದುರ್ಗ</strong>: ಇಲ್ಲಿಯ ಪ್ರಮುಖ ವೃತ್ತಗಳೆಲ್ಲ ಕೇಸರಿಮಯವಾಗಿವೆ. ಸಂಜೆ ಆಗುತ್ತಿದ್ದಂತೆ ಜಗಮಗಿಸುವ ವಿದ್ಯುದ್ದೀಪಗಳು ದಾರಿಹೋಕರನ್ನು ಆಕರ್ಷಿಸುತ್ತಿವೆ. ಕಣ್ಣು ಹಾಯಿಸಿದಷ್ಟು ದೂರದವರೆಗೂ ಮಿನುಗುವ ದೀಪಗಳು ಕಂಗೊಳಿಸುತ್ತಿವೆ.</p>.<p>ಕೋಟೆನಗರಿಯ ‘ಹಿಂದೂ ಮಹಾಗಣಪತಿ ವಿಸರ್ಜನೆ’ ಅ. 2ರಂದು ನಡೆಯಲಿದೆ. ಅದರ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಸಕಲ ಸಿದ್ಧತೆಗಳು ಜೋರಾಗಿ ನಡೆದಿದ್ದು, ನಗರ ಸಂಭ್ರಮದಿಂದ ಸಜ್ಜಾಗುತ್ತಿದೆ.</p>.<p>ಮದಕರಿನಾಯಕ ವೃತ್ತವನ್ನು ರಾಜ ವೈಭವದ ಮಾದರಿಯಲ್ಲೇ ಅಲಂಕರಿಸಲಾಗಿದ್ದು, ನಾಯಕರು ಕುದುರೆ ಏರಿ ಬರುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ. ಕೆಳಭಾಗವನ್ನು ಕಮಲದ ಹೂವಿನ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅಲ್ಲದೇ, ವಿದ್ಯುದೀಪಗಳಿಂದಲೂ ವರ್ಣರಂಜಿತವಾಗಿ ಸಿಂಗಾರಗೊಳಿಸಲಾಗಿದೆ. ಸಂಜೆಯ ವೇಳೆ ಕೆಲವರು ಫೋಟೊಗಳನ್ನು ಕ್ಲಿಕ್ಕಿಸಿಕೊಂಡರೆ, ಮತ್ತೆ ಕೆಲವರು ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ.</p>.<p>ಇಲ್ಲಿನ ಅನೇಕ ಆಟೊಗಳ ಮೇಲೆ ಈಗಾಗಲೇ ಕೇಸರಿ ಧ್ವಜಗಳು ಹಾರಾಡುತ್ತಿವೆ. ಹಿಂಭಾಗದಲ್ಲಿ 2ರಂದು ವಿಸರ್ಜನೆ ಮಹೋತ್ಸವ ಎಂಬ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ನೂರಾರು ಯುವಕ-ಯುವತಿಯರು ಸ್ವಯಂ ಪ್ರೇರಿತರಾಗಿ ವಿವಿಧ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p><strong><span class="quote">ವಿದ್ಯುದೀಪಗಳ ಸಿಂಗಾರ:</span></strong>ಹಿಂದೂ ಮಹಾಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಜೈನಧಾಮದ ಬಿ.ಡಿ. ರಸ್ತೆಯಿಂದ ಗಾಂಧಿ ವೃತ್ತದವರೆಗೂ ಅಲ್ಲಲ್ಲಿ ವರ್ಣರಂಜಿತ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ನಗರ ಕಂಗೊಳಿಸುತ್ತಿದೆ. ಹಿಂದಿನ ವರ್ಷಕ್ಕಿಂತಲೂ ಈ ಬಾರಿ ವಿದ್ಯುದೀಪಾಲಂಕಾರಕ್ಕೆ ಒತ್ತು ನೀಡಲಾಗಿದೆ.</p>.<p><strong><span class="quote">ಅದ್ದೂರಿ ಬೀಳ್ಕೊಡುಗಾಗಿ ಸಿದ್ಧತೆ:</span></strong> 20 ದಿನಗಳ ಹಿಂದೆ ಪುರ ಪ್ರವೇಶಿಸಿದ ಮಹಾಗಣಪನನ್ನು ಸಂಭ್ರಮದೊಂದಿಗೆ ಬೀಳ್ಕೊಡಲು ಭಕ್ತರು ಸಜ್ಜಾಗುತ್ತಿದ್ದಾರೆ. ಹಿಂದಿನ ವರ್ಷದಂತೆ ಸ್ವಾತಂತ್ರ್ಯ ಮತ್ತು ವೀರ ಯೋಧರ ಸ್ತಬ್ಧ ಚಿತ್ರಗಳು, ನಾಲ್ಕೈದು ಜನಪದ ಕಲಾತಂಡಗಳೊಂದಿಗೆ ಕಳುಹಿಸಿಕೊಡಲು ಸಿದ್ಧತೆ ಭರದಿಂದ ಸಾಗಿದೆ.</p>.<p>ಆಯೋಜಕರು ಈ ಬಾರಿಯೂ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲೆಯ ವಿವಿಧ ಮಠಾಧೀಶರನ್ನು ಆಹ್ವಾನಿಸಿದ್ದಾರೆ. ಅನೇಕ ಸಂಸ್ಥೆಗಳು ಸ್ವಇಚ್ಛೆಯಿಂದ ತಮ್ಮ ವ್ಯಾಪ್ತಿಯಲ್ಲಿ ವಿದ್ಯುದೀಪಾಲಂಕಾರ ಮಾಡಿಕೊಳ್ಳುತ್ತಿದ್ದಾರೆ. ವ್ಯಾಪಾರಸ್ಥರೂ ಇದಕ್ಕೆ ಹೊರತಾಗಿಲ್ಲ. ಮುಖ್ಯ ರಸ್ತೆ ಮಾರ್ಗಗಳಲ್ಲಿನ ಅಂಗಡಿಗಳ ಮುಂಭಾಗದಲ್ಲೂ ಈ ದೃಶ್ಯ ಕಂಡು ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ಇಲ್ಲಿಯ ಪ್ರಮುಖ ವೃತ್ತಗಳೆಲ್ಲ ಕೇಸರಿಮಯವಾಗಿವೆ. ಸಂಜೆ ಆಗುತ್ತಿದ್ದಂತೆ ಜಗಮಗಿಸುವ ವಿದ್ಯುದ್ದೀಪಗಳು ದಾರಿಹೋಕರನ್ನು ಆಕರ್ಷಿಸುತ್ತಿವೆ. ಕಣ್ಣು ಹಾಯಿಸಿದಷ್ಟು ದೂರದವರೆಗೂ ಮಿನುಗುವ ದೀಪಗಳು ಕಂಗೊಳಿಸುತ್ತಿವೆ.</p>.<p>ಕೋಟೆನಗರಿಯ ‘ಹಿಂದೂ ಮಹಾಗಣಪತಿ ವಿಸರ್ಜನೆ’ ಅ. 2ರಂದು ನಡೆಯಲಿದೆ. ಅದರ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಸಕಲ ಸಿದ್ಧತೆಗಳು ಜೋರಾಗಿ ನಡೆದಿದ್ದು, ನಗರ ಸಂಭ್ರಮದಿಂದ ಸಜ್ಜಾಗುತ್ತಿದೆ.</p>.<p>ಮದಕರಿನಾಯಕ ವೃತ್ತವನ್ನು ರಾಜ ವೈಭವದ ಮಾದರಿಯಲ್ಲೇ ಅಲಂಕರಿಸಲಾಗಿದ್ದು, ನಾಯಕರು ಕುದುರೆ ಏರಿ ಬರುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ. ಕೆಳಭಾಗವನ್ನು ಕಮಲದ ಹೂವಿನ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅಲ್ಲದೇ, ವಿದ್ಯುದೀಪಗಳಿಂದಲೂ ವರ್ಣರಂಜಿತವಾಗಿ ಸಿಂಗಾರಗೊಳಿಸಲಾಗಿದೆ. ಸಂಜೆಯ ವೇಳೆ ಕೆಲವರು ಫೋಟೊಗಳನ್ನು ಕ್ಲಿಕ್ಕಿಸಿಕೊಂಡರೆ, ಮತ್ತೆ ಕೆಲವರು ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ.</p>.<p>ಇಲ್ಲಿನ ಅನೇಕ ಆಟೊಗಳ ಮೇಲೆ ಈಗಾಗಲೇ ಕೇಸರಿ ಧ್ವಜಗಳು ಹಾರಾಡುತ್ತಿವೆ. ಹಿಂಭಾಗದಲ್ಲಿ 2ರಂದು ವಿಸರ್ಜನೆ ಮಹೋತ್ಸವ ಎಂಬ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ನೂರಾರು ಯುವಕ-ಯುವತಿಯರು ಸ್ವಯಂ ಪ್ರೇರಿತರಾಗಿ ವಿವಿಧ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p><strong><span class="quote">ವಿದ್ಯುದೀಪಗಳ ಸಿಂಗಾರ:</span></strong>ಹಿಂದೂ ಮಹಾಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಜೈನಧಾಮದ ಬಿ.ಡಿ. ರಸ್ತೆಯಿಂದ ಗಾಂಧಿ ವೃತ್ತದವರೆಗೂ ಅಲ್ಲಲ್ಲಿ ವರ್ಣರಂಜಿತ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ನಗರ ಕಂಗೊಳಿಸುತ್ತಿದೆ. ಹಿಂದಿನ ವರ್ಷಕ್ಕಿಂತಲೂ ಈ ಬಾರಿ ವಿದ್ಯುದೀಪಾಲಂಕಾರಕ್ಕೆ ಒತ್ತು ನೀಡಲಾಗಿದೆ.</p>.<p><strong><span class="quote">ಅದ್ದೂರಿ ಬೀಳ್ಕೊಡುಗಾಗಿ ಸಿದ್ಧತೆ:</span></strong> 20 ದಿನಗಳ ಹಿಂದೆ ಪುರ ಪ್ರವೇಶಿಸಿದ ಮಹಾಗಣಪನನ್ನು ಸಂಭ್ರಮದೊಂದಿಗೆ ಬೀಳ್ಕೊಡಲು ಭಕ್ತರು ಸಜ್ಜಾಗುತ್ತಿದ್ದಾರೆ. ಹಿಂದಿನ ವರ್ಷದಂತೆ ಸ್ವಾತಂತ್ರ್ಯ ಮತ್ತು ವೀರ ಯೋಧರ ಸ್ತಬ್ಧ ಚಿತ್ರಗಳು, ನಾಲ್ಕೈದು ಜನಪದ ಕಲಾತಂಡಗಳೊಂದಿಗೆ ಕಳುಹಿಸಿಕೊಡಲು ಸಿದ್ಧತೆ ಭರದಿಂದ ಸಾಗಿದೆ.</p>.<p>ಆಯೋಜಕರು ಈ ಬಾರಿಯೂ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲೆಯ ವಿವಿಧ ಮಠಾಧೀಶರನ್ನು ಆಹ್ವಾನಿಸಿದ್ದಾರೆ. ಅನೇಕ ಸಂಸ್ಥೆಗಳು ಸ್ವಇಚ್ಛೆಯಿಂದ ತಮ್ಮ ವ್ಯಾಪ್ತಿಯಲ್ಲಿ ವಿದ್ಯುದೀಪಾಲಂಕಾರ ಮಾಡಿಕೊಳ್ಳುತ್ತಿದ್ದಾರೆ. ವ್ಯಾಪಾರಸ್ಥರೂ ಇದಕ್ಕೆ ಹೊರತಾಗಿಲ್ಲ. ಮುಖ್ಯ ರಸ್ತೆ ಮಾರ್ಗಗಳಲ್ಲಿನ ಅಂಗಡಿಗಳ ಮುಂಭಾಗದಲ್ಲೂ ಈ ದೃಶ್ಯ ಕಂಡು ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>