<p><strong>ಸಿರಿಗೆರೆ:</strong> ಕೃಷಿಕರು ಸದ್ದಿಲ್ಲದಂತೆ ಏನೇನೋ ಪ್ರಯೋಗ ಮಾಡಿ ಬೆಳಕಿಗೆ ಬರುತ್ತಿದ್ದಾರೆ. ಸಮೀಪದ ಚಿಕ್ಕಬೆನ್ನೂರು ಗ್ರಾಮದ ತಿಪ್ಪೇಸ್ವಾಮಿ ತಮ್ಮ 53ನೇ ವಯಸ್ಸಿನಲ್ಲಿಯೂ ಕೃಷಿ ಚಟುವಟಿಕೆ ಬಿಡದೇ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಿ ಗಮನ ಸೆಳೆದಿದ್ದಾರೆ.</p><p>ತಮ್ಮ ಪಾಲಿಗಿರುವ ಅತ್ಯಲ್ಪ ಜಮೀನಿನಲ್ಲೇ ಅಡಿಕೆ ಬೆಳೆಯಲು ಮುಂದಾಗಿ, 3 ತಿಂಗಳ ಹಿಂದೆ ಅಡಿಕೆ ಸಸಿ ನೆಟ್ಟಿದ್ದಾರೆ. ಆ ಸಸಿಗಳ ಮಧ್ಯೆ ಕೇವಲ 12 ಸಾಲು ಬೆಂಡೆ ಬೀಜ ಬಿತ್ತಿ ಉತ್ತಮ ಇಳುವರಿ ತೆಗೆದಿದ್ದಾರೆ.</p><p>ಇದಕ್ಕೆ ತಿಪ್ಪೇಸ್ವಾಮಿ ಖರ್ಚು ಮಾಡಿರುವುದು ₹ 4,000 ಮಾತ್ರ. ಅಡಿಗೊಂದರಂತೆ ಭೂಮಿಯ ಹದ ನೋಡಿಕೊಂಡು ಬೆಂಡೆ ಊರಿದ್ದಾರೆ. ಅವು ಮೊಳಕೆ ಬಂದ ಕೆಲ ದಿನಗಳ ನಂತರ ಅಲ್ಪ ಪ್ರಮಾಣದ ರಸಗೊಬ್ಬರ ಕೊಟ್ಟಿದ್ದಾರೆ. ನೋಡನೋಡುತ್ತಿದ್ದಂತೆಯೇ ಸಸಿಗಳು ನಳನಳಿಸತೊಡಗಿದವು. ಇದರಿಂದ ಖುಷಿಯಾದ ರೈತ ಬೆಳೆಯನ್ನು ಕಾಪಾಡಿಕೊಳ್ಳಲು 3 ಬಾರಿ ಕೀಟನಾಶಕ ಸಿಂಪಡಿಸಿದ್ದಾರೆ. ಇದರ ಪರಿಣಾಮ ಬೆಂಡೆ ನಿರೀಕ್ಷೆ ಮೀರಿ ಬೆಳೆದಿದೆ.</p><p>‘ಮೆಕ್ಕೆಜೋಳ ಬೆಳೆದಿದ್ದರೆ ನನಗೆ ಇಷ್ಟು ಲಾಭ ಆಗುತ್ತಿರಲಿಲ್ಲ’ ಎನ್ನುವ ಅವರು, ‘ಖರ್ಚು ತೆಗೆದು ಈಗಾಗಲೇ ಅಂದಾಜು ₹ 75,000 ಆದಾಯ ಬಂದಿದೆ’ ಎನ್ನುತ್ತಾರೆ.</p><p>ಮೊದಲೆಲ್ಲ ಸಮೀಪದ ಹಳ್ಳಿಗಳಲ್ಲಿ ನಡೆಯುವ ವಾರದ ಸಂತೆಗಳಿಗೆ ಬೆಂಡೆಕಾಯಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಅಲ್ಲಿ ಬೆಲೆ ಕಡಿಮೆ ಸಿಗುತ್ತಿದ್ದರಿಂದ ಚಿತ್ರದುರ್ಗ ಮತ್ತು ದಾವಣಗೆರೆ ಮಾರುಕಟ್ಟೆಗೆ ಒಯ್ದಿದ್ದಾರೆ. ಇದರಿಂದ ಒಳ್ಳೆಯ ಬೆಲೆ ಸಿಕ್ಕಿದೆ. ಇನ್ನೂ ಕಡಿಮೆ ಎಂದರೂ ₹ 20,000ದಷ್ಟು ಇಳುವರಿ ಬರಬಹುದೆಂಬ ಅಂದಾಜು ಅವರದು.</p>.<p>‘ಈ ರೀತಿ ಬೆಳೆ ಬೆಳೆದಿರುವುದು ಹೊಸದು. ಇಷ್ಟು ಕಡಿಮೆ ಖರ್ಚು ಮಾಡಿ ನನಗೆ ಲಾಭ ಬಂದಿದೆ. ಬೆಳೆ ಕಡಿಮೆ ಇದ್ದಾಗ ನಾನೇ ಬಿಡಿಸುತ್ತೇನೆ. ಗಿಡದಲ್ಲಿ ಜಾಸ್ತಿ ಬೆಳೆ ಇದ್ದಾಗ ಕೂಲಿಯವರನ್ನು ಕರೆದುಕೊಳ್ಳುತ್ತೇನೆ. ಮೆಕ್ಕೆಜೋಳ ಬಿತ್ತಿದ್ದರೆ ಆ ಬೆಳೆಗೆ ಮಾಡುವ ಖರ್ಚು ಅಧಿಕವಾಗಿರುತ್ತಿತ್ತು. ಹಣ ಕೈಗೆ ಬರಲು ಕಾಯಬೇಕಿತ್ತು. ಆದರೆ, ಬೆಂಡೆ ಬಿತ್ತಿದ್ದರಿಂದ ನಾನು ಬಿಡಿಸಿ ಮಾರುಕಟ್ಟೆಗೆ ಕೊಂಡೊಯ್ದ ದಿನವೇ ಹಣ ಸಿಗುತ್ತದೆ. ಇದು ಖುಷಿಯ ವಿಚಾರ’ ಎಂದು ಅವರು ಹೇಳುತ್ತಾರೆ.</p>.<p>ಇಷ್ಟೊಂದು ಆದಾಯ ಬರುವ ನಿರೀಕ್ಷೆ ಇರಲಿಲ್ಲ. ನಾನು ತಂದೆ ಮತ್ತು ತಾಯಿ ಮೂವರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಕೂಲಿ ಕಾರ್ಮಿಕರನ್ನು ಹೆಚ್ಚು ಅವಲಂಬಿಸದೇ ಇರುವುದರಿಂದ ಲಾಭದ ಪ್ರಮಾಣ ಸ್ವಲ್ಪ ಜಾಸ್ತಿಯಾಗಿದೆ.</p><p><strong>– ಟಿ. ಮಂಜುನಾಥ್ ತಿಪ್ಪೇಸ್ವಾಮಿಯವರ ಮಗ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ:</strong> ಕೃಷಿಕರು ಸದ್ದಿಲ್ಲದಂತೆ ಏನೇನೋ ಪ್ರಯೋಗ ಮಾಡಿ ಬೆಳಕಿಗೆ ಬರುತ್ತಿದ್ದಾರೆ. ಸಮೀಪದ ಚಿಕ್ಕಬೆನ್ನೂರು ಗ್ರಾಮದ ತಿಪ್ಪೇಸ್ವಾಮಿ ತಮ್ಮ 53ನೇ ವಯಸ್ಸಿನಲ್ಲಿಯೂ ಕೃಷಿ ಚಟುವಟಿಕೆ ಬಿಡದೇ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಿ ಗಮನ ಸೆಳೆದಿದ್ದಾರೆ.</p><p>ತಮ್ಮ ಪಾಲಿಗಿರುವ ಅತ್ಯಲ್ಪ ಜಮೀನಿನಲ್ಲೇ ಅಡಿಕೆ ಬೆಳೆಯಲು ಮುಂದಾಗಿ, 3 ತಿಂಗಳ ಹಿಂದೆ ಅಡಿಕೆ ಸಸಿ ನೆಟ್ಟಿದ್ದಾರೆ. ಆ ಸಸಿಗಳ ಮಧ್ಯೆ ಕೇವಲ 12 ಸಾಲು ಬೆಂಡೆ ಬೀಜ ಬಿತ್ತಿ ಉತ್ತಮ ಇಳುವರಿ ತೆಗೆದಿದ್ದಾರೆ.</p><p>ಇದಕ್ಕೆ ತಿಪ್ಪೇಸ್ವಾಮಿ ಖರ್ಚು ಮಾಡಿರುವುದು ₹ 4,000 ಮಾತ್ರ. ಅಡಿಗೊಂದರಂತೆ ಭೂಮಿಯ ಹದ ನೋಡಿಕೊಂಡು ಬೆಂಡೆ ಊರಿದ್ದಾರೆ. ಅವು ಮೊಳಕೆ ಬಂದ ಕೆಲ ದಿನಗಳ ನಂತರ ಅಲ್ಪ ಪ್ರಮಾಣದ ರಸಗೊಬ್ಬರ ಕೊಟ್ಟಿದ್ದಾರೆ. ನೋಡನೋಡುತ್ತಿದ್ದಂತೆಯೇ ಸಸಿಗಳು ನಳನಳಿಸತೊಡಗಿದವು. ಇದರಿಂದ ಖುಷಿಯಾದ ರೈತ ಬೆಳೆಯನ್ನು ಕಾಪಾಡಿಕೊಳ್ಳಲು 3 ಬಾರಿ ಕೀಟನಾಶಕ ಸಿಂಪಡಿಸಿದ್ದಾರೆ. ಇದರ ಪರಿಣಾಮ ಬೆಂಡೆ ನಿರೀಕ್ಷೆ ಮೀರಿ ಬೆಳೆದಿದೆ.</p><p>‘ಮೆಕ್ಕೆಜೋಳ ಬೆಳೆದಿದ್ದರೆ ನನಗೆ ಇಷ್ಟು ಲಾಭ ಆಗುತ್ತಿರಲಿಲ್ಲ’ ಎನ್ನುವ ಅವರು, ‘ಖರ್ಚು ತೆಗೆದು ಈಗಾಗಲೇ ಅಂದಾಜು ₹ 75,000 ಆದಾಯ ಬಂದಿದೆ’ ಎನ್ನುತ್ತಾರೆ.</p><p>ಮೊದಲೆಲ್ಲ ಸಮೀಪದ ಹಳ್ಳಿಗಳಲ್ಲಿ ನಡೆಯುವ ವಾರದ ಸಂತೆಗಳಿಗೆ ಬೆಂಡೆಕಾಯಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಅಲ್ಲಿ ಬೆಲೆ ಕಡಿಮೆ ಸಿಗುತ್ತಿದ್ದರಿಂದ ಚಿತ್ರದುರ್ಗ ಮತ್ತು ದಾವಣಗೆರೆ ಮಾರುಕಟ್ಟೆಗೆ ಒಯ್ದಿದ್ದಾರೆ. ಇದರಿಂದ ಒಳ್ಳೆಯ ಬೆಲೆ ಸಿಕ್ಕಿದೆ. ಇನ್ನೂ ಕಡಿಮೆ ಎಂದರೂ ₹ 20,000ದಷ್ಟು ಇಳುವರಿ ಬರಬಹುದೆಂಬ ಅಂದಾಜು ಅವರದು.</p>.<p>‘ಈ ರೀತಿ ಬೆಳೆ ಬೆಳೆದಿರುವುದು ಹೊಸದು. ಇಷ್ಟು ಕಡಿಮೆ ಖರ್ಚು ಮಾಡಿ ನನಗೆ ಲಾಭ ಬಂದಿದೆ. ಬೆಳೆ ಕಡಿಮೆ ಇದ್ದಾಗ ನಾನೇ ಬಿಡಿಸುತ್ತೇನೆ. ಗಿಡದಲ್ಲಿ ಜಾಸ್ತಿ ಬೆಳೆ ಇದ್ದಾಗ ಕೂಲಿಯವರನ್ನು ಕರೆದುಕೊಳ್ಳುತ್ತೇನೆ. ಮೆಕ್ಕೆಜೋಳ ಬಿತ್ತಿದ್ದರೆ ಆ ಬೆಳೆಗೆ ಮಾಡುವ ಖರ್ಚು ಅಧಿಕವಾಗಿರುತ್ತಿತ್ತು. ಹಣ ಕೈಗೆ ಬರಲು ಕಾಯಬೇಕಿತ್ತು. ಆದರೆ, ಬೆಂಡೆ ಬಿತ್ತಿದ್ದರಿಂದ ನಾನು ಬಿಡಿಸಿ ಮಾರುಕಟ್ಟೆಗೆ ಕೊಂಡೊಯ್ದ ದಿನವೇ ಹಣ ಸಿಗುತ್ತದೆ. ಇದು ಖುಷಿಯ ವಿಚಾರ’ ಎಂದು ಅವರು ಹೇಳುತ್ತಾರೆ.</p>.<p>ಇಷ್ಟೊಂದು ಆದಾಯ ಬರುವ ನಿರೀಕ್ಷೆ ಇರಲಿಲ್ಲ. ನಾನು ತಂದೆ ಮತ್ತು ತಾಯಿ ಮೂವರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಕೂಲಿ ಕಾರ್ಮಿಕರನ್ನು ಹೆಚ್ಚು ಅವಲಂಬಿಸದೇ ಇರುವುದರಿಂದ ಲಾಭದ ಪ್ರಮಾಣ ಸ್ವಲ್ಪ ಜಾಸ್ತಿಯಾಗಿದೆ.</p><p><strong>– ಟಿ. ಮಂಜುನಾಥ್ ತಿಪ್ಪೇಸ್ವಾಮಿಯವರ ಮಗ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>