ಸಪ್ತಪದಿ ತುಳಿಯಲು ಸಿಂಗಾರಗೊಂಡಿದ್ದ ಶ್ರವಣ ದೋಷವುಳ್ಳ ವಧು–ವರರ ನವ ಜೋಡಿ ಅಲ್ಲಿದ್ದವರ ಮನ ಸೆಳೆಯಿತು.ಜಾತಿ, ಧರ್ಮ, ಪಂಥ ಹಾಗೂ ಪ್ರತಿಷ್ಠೆಯ ಆಚೆಗೆ ರಾಷ್ಟಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ಮಂತ್ರ ಮಾಂಗಲ್ಯ ಸಾರುವ ಇಂತಹ ಅಪರೂಪದ ವಿವಾಹವು ಹೆಚ್ಚು ಹೆಚ್ಚು ನಡೆಯಲಿ ಎಂದು ಬಂದಿದ್ದವರು ಆಶಿಸಿ, ನವಜೋಡಿಗಳನ್ನು ಹರಸಿದರು.