<p><strong>ಸಿರಿಗೆರೆ</strong>: ಭರಮಸಾಗರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮುಂಚಿತವಾಗಿಯೇ ಬಿತ್ತನೆ ಮಾಡಿರುವ ಮೆಕ್ಕೆಜೋಳದ ಪೈರಿಗೆ ಸೈನಿಕ ಹುಳು ರೋಗ ಬಾಧೆ ತಟ್ಟಿರುವುದು ವರದಿಯಾಗಿದೆ.</p>.<p>ಸಿರಿಗೆರೆ ಸುತ್ತಲಿನ ಹಲವು ಹಳ್ಳಿಗಳಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳದ ಜಮೀನುಗಳಿಗೆ ಕೃಷಿ ಅಧಿಕಾರಿ ಎಚ್.ಎಸ್. ವನಜಾಕ್ಷಿ ಮತ್ತು ತಂಡ ಬುಧವಾರ ಭೇಟಿ ನೀಡಿ ರೋಗವನ್ನು ದೃಢೀಕರಿಸಿದ್ದಾರೆ.</p>.<p>ಸಿರಿಗೆರೆಯ ಕೃಷಿಕ ಬೆನ್ನೂರ ಸತೀಶ್ ಜಮೀನಿನಲ್ಲಿ ಪರಿಶೀಲನೆ ನಡೆಸಲಾಯಿತು. ಮೆಕ್ಕೆಜೋಳ ಬೆಳೆಯಲ್ಲಿ ಎಲೆ ಮತ್ತು ಸುಳಿಯನ್ನು ತಿನ್ನುವ ಹುಳುಗಳು ಕಾಣಿಸಿಕೊಂಡಿವೆ. ಇದನ್ನು ವೈಜ್ಞಾನಿಕವಾಗಿ ಸ್ಫೋಡಾಫ್ಟರಾ ಫ್ಯೂಜಿಫಡಾ ಎಂದು ಕರೆಯಲಾಗುತ್ತದೆ. ಈ ಹುಳುಗಳ ಜೊತೆಗೆ ಇತರೆ ಕಾಂಡ ಕೊರಕ ಬಾಧೆಯೂ ಕಂಡುಬಂದಿದೆ.</p>.<p>ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಕಡಿಮೆ ಉಷ್ಣಾಂಶ ಮತ್ತು ಹೆಚ್ಚಿನ ಆದ್ರತೆಯ ವಾತಾವರಣ ಈ ರೋಗ ಉಲ್ಬಣಿಸಲು ಕಾರಣವಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ಮಳೆ ಬಂದರೆ ಈ ರೋಗ ತಾನಾಗಿ ನಿಯಂತ್ರಣಕ್ಕೆ ಬರುತ್ತದೆ. ಮಳೆ ಕಡಿಮೆ ಆದಲ್ಲಿ ಈ ರೋಗ ಕಂಡುಬರುವ ಜಮೀನಿನ ರೈತರು ಬಿತ್ತನೆ ಮಾಡಿದ 15–20 ದಿನಗಳಲ್ಲಿ ಮೆಟರೀಜಿಯಂ ಅನಿಸೋಷ್ಠಿಯೆ 5 ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ಸುಳಿಗೆ ಸಿಂಪಡಿಸಬೇಕು ಎಂದು ಚ್.ಎಸ್. ವನಜಾಕ್ಷಿ ತಿಳಿಸಿದರು. </p>.<p>ರೈತರು ತಮ್ಮ ಜಮೀನುಗಳಲ್ಲಿ ದೀರ್ಘಕಾಲದಿಂದ ಒಂದೇ ಬೆಳೆಯನ್ನು ಬೆಳೆಯುವ ಪದ್ಧತಿ ಅನುಸರಿಸುತ್ತಿರುವುದೂ ಕೂಡ ಇದಕ್ಕೆ ಕಾರಣವಾಗಿದೆ. ಜಮೀನಿನಲ್ಲಿ ಪ್ರತಿ ವರ್ಷವೂ ಬೇರೆ ಬೇರೆ ಬೆಳೆಗಳನ್ನು ರೂಢಿ ಮಾಡಿಕೊಳ್ಳುವುದು ಅಗತ್ಯ. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ ಎಂದು ಹೇಳಿದರು.</p>.<p>ಅಧಿಕಾರಿಗಳ ಭೇಟಿಯ ಸಮಯದಲ್ಲಿ ರೈತರಾದ ಬೆನ್ನೂರು ಸತೀಶ್, ಪಂಚಾಕ್ಷರಯ್ಯ, ಷಣ್ಮುಖ, ಕೊಟ್ರೇಶ್ ಮುಂತಾದವರು ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ</strong>: ಭರಮಸಾಗರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮುಂಚಿತವಾಗಿಯೇ ಬಿತ್ತನೆ ಮಾಡಿರುವ ಮೆಕ್ಕೆಜೋಳದ ಪೈರಿಗೆ ಸೈನಿಕ ಹುಳು ರೋಗ ಬಾಧೆ ತಟ್ಟಿರುವುದು ವರದಿಯಾಗಿದೆ.</p>.<p>ಸಿರಿಗೆರೆ ಸುತ್ತಲಿನ ಹಲವು ಹಳ್ಳಿಗಳಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳದ ಜಮೀನುಗಳಿಗೆ ಕೃಷಿ ಅಧಿಕಾರಿ ಎಚ್.ಎಸ್. ವನಜಾಕ್ಷಿ ಮತ್ತು ತಂಡ ಬುಧವಾರ ಭೇಟಿ ನೀಡಿ ರೋಗವನ್ನು ದೃಢೀಕರಿಸಿದ್ದಾರೆ.</p>.<p>ಸಿರಿಗೆರೆಯ ಕೃಷಿಕ ಬೆನ್ನೂರ ಸತೀಶ್ ಜಮೀನಿನಲ್ಲಿ ಪರಿಶೀಲನೆ ನಡೆಸಲಾಯಿತು. ಮೆಕ್ಕೆಜೋಳ ಬೆಳೆಯಲ್ಲಿ ಎಲೆ ಮತ್ತು ಸುಳಿಯನ್ನು ತಿನ್ನುವ ಹುಳುಗಳು ಕಾಣಿಸಿಕೊಂಡಿವೆ. ಇದನ್ನು ವೈಜ್ಞಾನಿಕವಾಗಿ ಸ್ಫೋಡಾಫ್ಟರಾ ಫ್ಯೂಜಿಫಡಾ ಎಂದು ಕರೆಯಲಾಗುತ್ತದೆ. ಈ ಹುಳುಗಳ ಜೊತೆಗೆ ಇತರೆ ಕಾಂಡ ಕೊರಕ ಬಾಧೆಯೂ ಕಂಡುಬಂದಿದೆ.</p>.<p>ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಕಡಿಮೆ ಉಷ್ಣಾಂಶ ಮತ್ತು ಹೆಚ್ಚಿನ ಆದ್ರತೆಯ ವಾತಾವರಣ ಈ ರೋಗ ಉಲ್ಬಣಿಸಲು ಕಾರಣವಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ಮಳೆ ಬಂದರೆ ಈ ರೋಗ ತಾನಾಗಿ ನಿಯಂತ್ರಣಕ್ಕೆ ಬರುತ್ತದೆ. ಮಳೆ ಕಡಿಮೆ ಆದಲ್ಲಿ ಈ ರೋಗ ಕಂಡುಬರುವ ಜಮೀನಿನ ರೈತರು ಬಿತ್ತನೆ ಮಾಡಿದ 15–20 ದಿನಗಳಲ್ಲಿ ಮೆಟರೀಜಿಯಂ ಅನಿಸೋಷ್ಠಿಯೆ 5 ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ಸುಳಿಗೆ ಸಿಂಪಡಿಸಬೇಕು ಎಂದು ಚ್.ಎಸ್. ವನಜಾಕ್ಷಿ ತಿಳಿಸಿದರು. </p>.<p>ರೈತರು ತಮ್ಮ ಜಮೀನುಗಳಲ್ಲಿ ದೀರ್ಘಕಾಲದಿಂದ ಒಂದೇ ಬೆಳೆಯನ್ನು ಬೆಳೆಯುವ ಪದ್ಧತಿ ಅನುಸರಿಸುತ್ತಿರುವುದೂ ಕೂಡ ಇದಕ್ಕೆ ಕಾರಣವಾಗಿದೆ. ಜಮೀನಿನಲ್ಲಿ ಪ್ರತಿ ವರ್ಷವೂ ಬೇರೆ ಬೇರೆ ಬೆಳೆಗಳನ್ನು ರೂಢಿ ಮಾಡಿಕೊಳ್ಳುವುದು ಅಗತ್ಯ. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ ಎಂದು ಹೇಳಿದರು.</p>.<p>ಅಧಿಕಾರಿಗಳ ಭೇಟಿಯ ಸಮಯದಲ್ಲಿ ರೈತರಾದ ಬೆನ್ನೂರು ಸತೀಶ್, ಪಂಚಾಕ್ಷರಯ್ಯ, ಷಣ್ಮುಖ, ಕೊಟ್ರೇಶ್ ಮುಂತಾದವರು ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>