ಓಬಳಾಪುರದ ಗುಡ್ಡದಲ್ಲಿ ಕರಡಿಗಳಿದ್ದು, ಬೇಸಿಗೆಯಲ್ಲಿ ನೀರು, ಆಹಾರವನ್ನು ಹುಡುಕಿಕೊಂಡು ಜನವಸತಿ ಪ್ರದೇಶಕ್ಕೆ ಬಂದಿವೆ. ಕರಡಿಗಳು ಜನರನ್ನು ನೋಡಿದಾಕ್ಷಣ ಗಾಬರಿಗೊಂಡು ದಾಳಿ ನಡೆಸುತ್ತವೆ. ಹಾಗಾಗಿ ಇಂದು ವಲಸೆ, ಅಜ್ಜನಹಳ್ಳಿ, ಚನ್ನಗಾನಹಳ್ಳಿ, ಬಂಜಿಗೆರೆ, ಘಟ್ಟಪರ್ತಿ ಗ್ರಾಮದ ಜನರಿಗೆ ರಾತ್ರಿವೇಳೆ ಹೊರಗಡೆ ಬಾರದಂತೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ರೂ ಆತಂಕ ಪಡಬಾರದು. ಕರಡಿಗಳನ್ನು ಸುರಕ್ಷಿತವಾಗಿ ಹಿಡಿಯಲು ಅಗತ್ಯ ಕ್ರಮಕೈಗೊಳ್ಳಲು ಸ್ಥಳದಲ್ಲೇ ಮೊಕಾಂ ಹೂಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್, ಅರಣ್ಯಾಧಿಕಾರಿ ವಸಂತ್ಕುಮಾರ್, ಅರಣ್ಯ ರಕ್ಷಕ ಇಮಾಮ್ ತಿಳಿಸಿದ್ದಾರೆ.