ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯೋ ಪಾಪ | ತಂತಿಬೇಲಿಯ ಉರುಳಿಗೆ ಸಿಲುಕಿದ ಕರಡಿ

Last Updated 14 ಅಕ್ಟೋಬರ್ 2019, 4:09 IST
ಅಕ್ಷರ ಗಾತ್ರ

ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ):ಸಮೀಪದ ರಾಯದುರ್ಗ ರಸ್ತೆಯ ಜಮೀನಿಗೆ ಅಳವಡಿಸಿದ ತಂತಿಬೇಲಿಯ ಉರುಳಿಗೆಕರಡಿಯೊಂದು ಸೋಮವಾರ ನಸುಕಿನಲ್ಲಿ ಸಿಲುಕಿದೆ.

ಬೇಲಿ ದಾಟಲು ಮುಂದಾದ ಕರಡಿಯ ಕೊರಳಿಗೆ ಉರುಳು ಬಿಗಿದುಕೊಂಡಿದೆ.ತಂತಿಯಿಂದ ಬಿಡಿಸಿಕೊಳ್ಳಲು ಕರಡಿ ಒದ್ದಾಡುತ್ತಿದೆ. ಕಾಡುಹಂದಿ ಹಾವಳಿ ತಡೆಗೆ ಉರುಳು ಹಾಕಿದ್ದರು ಎನ್ನಲಾಗಿದೆ.

ರಾಯದುರ್ಗ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಮುಂಜಾನೆಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕರಡಿ ನೋಡಲು ಸ್ಥಳದಲ್ಲಿ ನೂರಾರು ಜನ ಸೇರಿದ್ದಾರೆ. ಜನರ ಕೂಗಾಟಕ್ಕೆ ಕರಡಿ ಗಾಬರಿಗೊಂಡು ಒದ್ದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT