ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿ, ‘ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಲು ಗೋವಿಂದ ಕಾರಜೋಳ ಅವರು ಕಾರಣ. ₹ 2,600 ಕೋಟಿ ಅನುದಾನ, 1.5 ಲಕ್ಷ ಎಕರೆ ಭೂಮಿಗೆ ಡ್ರಿಪ್ ಸೌಲಭ್ಯ ನೀಡಿದ್ದಾರೆ. ಸಂಪರ್ಕ ಸೇತುವೆ ನಿರ್ಮಿಸಲು ₹ 100 ಕೋಟಿ, ಕಾಂಕ್ರೀಟ್ ರಸ್ತೆ ನಿರ್ಮಿಸಲು ₹ 10 ಕೋಟಿ, ಹೊಸದುರ್ಗ ಪಟ್ಟಣ ಅಭಿವೃದ್ಧಿಗೆ ₹ 40 ಕೋಟಿ ನೀಡಿದ್ದಾರೆ’ ಎಂದರು.